ಜಿಲ್ಲಾಧ್ಯಕ್ಷರಾಗಿ ಮಾಬುಸಾಬ್ ಲಕ್ಷ್ಮೇಶ್ವರ ನೇಮಕ
Mabusab Lakshmeshwar appointed as district president
ಗದಗ 26: ಕರ್ನಾಟಕ ಭೂ ಸಂಪತ್ತು ಸಂರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ್ ಮಲ್ನಾಡ್ ಅವರು ಮಾಬುಸಾಬ್ ಲಕ್ಷ್ಮೇಶ್ವರ ರವರನ್ನು ಗದಗ್ ಜಿಲ್ಲೆಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ತನಿಖಾ ಸಮಿತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಿ ಗೌರವ ತರುವಲ್ಲಿ ಹಾಗೂ ಸರಕಾರದ ಭೂ ಸಂಪತ್ತು ಸಂರಕ್ಷಿಸಿ ಸರಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡಂತವರಿಂದ ಮರಳಿ ಸಮಿತಿಯ ವತಿಯಿಂದ ಪಡೆದುಕೊಂಡು ಸದರ ಜಮೀನನ್ನು ಕಡುಬಡವರಿಗೆ ವ ಮನೆ ಇಲ್ಲದವರಿಗೆಕೊಡಿಸುವುದು ಮತ್ತು ಸರ್ವರಿಗೂ ಸಮಪಾಲು ಅನ್ನುವ ತತ್ವದಡಿ ಮುನ್ನಡೆಯುವುದು ಸರಕಾರಿ ಹಾಗೂ ಸಾರ್ವಜನಿಕ ಭೂ ಕಬಳಿಕೆದಾರರು ಭೂ ಅತಿಕ್ರಮಣಕಾರರಿಂದ ದೌರ್ಜನ್ಯಕ್ಕೆ ಒಳಗಾದ ಜನರಿಗೆ ಮತ್ತು ನಿರಾಶ್ರಿತ ಅನೇಕ ಬಡಜನರ ಸಮಸ್ಯೆಗಳಿಗೆ ಸ್ಪಂಧಿಸಿ ಸರ್ಕಾರದ ಮಟ್ಟದಲ್ಲಿ ಸೂಕ್ತ ಸಲಹೆಗಳಿಂದ ಕಾನೂನಿನ ಚೌಕಟ್ಟಿನೊ ಳಗೆ ಕಾರ್ಯವನ್ನು ನೆರವೇರಿಸುತ್ತೀರಿ ಎಂದು ನಂಬಿದ್ದೇವೆ.
ವಿಶೇಷ ಸೂಚನೆ : ರಾಜ್ಯ ತನಿಖಾ ಸಮಿತಿಯ ತತ್ವ ನೀತಿ ಸಿದ್ಧಾಂತಗಳನ್ನು ಎತ್ತಿಹಿಡಿದು ರಾಜ್ಯದಲ್ಲಿ ಸಮಿತಿಯನ್ನು ಒಂದು ಪ್ರಬಲ ಶಕ್ತಿಯಾಗಿ ಬೆಳೆಸುವಲ್ಲಿ ತಮ್ಮ ಪೂರ್ಣ ಸಹಕಾರವನ್ನು ಕೋರುತ್ತೇವೆ. ರಾಜ್ಯ ಸಮಿತಿಯ ನಿಯಮ ನಿಬಂಧನೆಗಳನ್ನು ಮತ್ತು ಸಮಿತಿಯು ಅಗೌರವ ಬಾರದ ಹಾಗೆ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲಿ ಸಮಿತಿಯ ಕಾರ್ಯವನ್ನು ಕೈಗೊಳ್ಳದಿದ್ದಲ್ಲಿ ತಮಗೆ ನೋಟಿಸನ್ನು ನೀಡದೇ ತಮ್ಮ ಸದಸ್ಯತ್ವವನ್ನು ಕಡಿಮೆ ಮಾಡಲಾಗುವುದು ಎಂದು ಸೂಚಿಸಿ ನಂತರ ಶುಭಾಶಯ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 