ಸಂಸದರಿಂದ ರಸ್ತೆ ಕಾಮಗಾರಿಗೆ ಚಾಲನೆ
MP launches road development work
ಯಮಕನಮರಡಿ 30: ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಇಂದಿರಾನಗರ ಗ್ರಾಮದಲ್ಲಿ ಮಂಗಳವಾರ ದಿ 28 ರಂದು ಲೋಕೋಪಯೋಗಿ ಇಲಾಖೆ ಲೆಕ್ಕ ಶಿರ್ಷಿಕೆ 50:54 ಜಿಲ್ಲಾ ಮತ್ತು ಇತರ ರಸ್ತೆಗಳ ಸುಧಾರಣೆ ಯೋಜನೆ ಅಡಿಯಲ್ಲಿ ಮಂಜೂರಾದ 4 ಕೋಟಿ ರೂ.ಗಳ ವೆಚ್ಚದಲ್ಲಿ ರಾ.ಹೆ 4 ರಿಂದ ಇಂದಿರಾನಗರ ಹಾಗೂ ರಾ.ಹೆ 78 ರ 400 ನಾಗನೂರ ಕೆ.ಎಂ ವರೆಗೆ ಕೊಡುವ ರಸ್ತೆ ಕೀ. ಮೀ 0.00 ರಿಂದ 4.00 ವರೆಗೆ ಖಡೀಕರಣ ಹಾಗೂ ಡಾಂಬರೀಕರಣ 1 ಸಿ.ಡಿ ನಿರ್ಮಾಣ ಕಾಮಗಾರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ ನೀಡಿದರು.
150 ಲಕ್ಷ ರೂಗಳ ವೆಚ್ಚದಲ್ಲಿ ಹಳೆ ವಂತಮುರಿ ಕೂಡುವ ಯಮಕನಮರಡಿ ದಾದಬಾನಹಟ್ಟಿ ಇಂದಿರಾನಗರದಿಂದ ತೋರಣಿ ಮಹಾರಾಷ್ಟ್ರ ಗಡಿಯವರಿಗೆ ರಸ್ತೆ ಕಿಮೀ 4.06 ರಿಂದ 7.07 ರವರೆಗೆ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಕಾಮಗಾರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯುವದುರಿನ ರವೀಂದ್ರ ಜಿಂಡ್ರಾಳಿ, ಹತ್ತರಗಿ ಗ್ರಾಮ ಅಧ್ಯಕ್ಷ ಸಮೀರ ಬೇಪಾರಿ, ದಸ್ತಗೀರ ಬಸ್ಸಾಪುರಿ, ಮಾಜಿ ತಾಪಂ ಅಧ್ಯಕ್ಷರು ಬಸವರಾಜ ಕೆಸೂರ, ಹಿರಿಯ ಕಾಂಗ್ರೆಸ್ ಮುಖಂಡರಾದ ಹನುಮಂತ ಗಾಡೀವಡ್ಡರ, ಪಾಂಡು ಗಾಡಿವಡ್ಡರ, ಶ್ರೀಶೈಲ ಸಾರಪುರೆ, ಮಲ್ಲೇಶ ಕಾಂಬಳೆ, ಸಂತೋಷ ನಾಯಕ, ಲಕ್ಷ್ಮಣ ಹೊಳಿದೋಳಿ, ರವಿ ಘಸ್ತಿ, ಗಣಪತಿ ಘಸ್ತಿ, ಲಗಾಮಾ ಜಿಂಡ್ರಾಳಿ, ಮಂಜು ಗೊಂದಳಿ, ಆನಂದ ಹುಕ್ಕೇರಿ, ಲಗಮವ್ವ ಹುಗಾಯಿ, ಮೀನಾಕ್ಷಿ ದೊಳಿ, ಹಾಗೂ ಗ್ರಾಮಸ್ಥರು ಪಿಡಬ್ಲೂಡಿ ಸ.ಕಾ.ನಿ ಅಭಿಯಂತ ಪ್ರವೀನ ಮಾಡ್ಯಾಳ, ಸಹಾಯಕ ಅಭಿಯಂತ ಸಂದೀಪ ಬಿ.ಆರ್, ಪ್ರಥಮ ದರ್ಜೆ ಗುತ್ತಿಗೆದಾರ ಎಸ್ ಬಿ ಸುತ್ತಗಟ್ಟಿ ಇತರರು ಇದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 