ಬ್ಯಾರೇಜ ಕಂ ಬ್ರಿಡ್ಜ ಕಾಮಗಾರಿಗೆ ಶಾಸಕ ವೈದ್ಯ ಭೂಮಿ ಪೂಜೆ
MLA Vaidya performs Bhoomi Puja for Barrage and Bridge work
ಯರಗಟ್ಟಿ, 18 ; ಈ ಭಾಗದ ರೈತರು ತಮ್ಮ ಹೊಲಗಳಿಗೆ ಸಂಚರಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಈ ಬ್ಯಾರೇಜನಿಂದ ಅನುಕೂಲವಾಗಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಜಾಲಿಕಟ್ಟಿ ಜೀವಾಪೂರ ಸಂಪರ್ಕಿಸುವ ರಸ್ತೆಗೆ ಮಂಗಳವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಸುಮಾರು 1.50 ಕೋಟಿ ರೂ. ಮೊತ್ತದ ಬ್ಯಾರೇಜ ಕಂ ಬ್ರಿಡ್ಜ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಯರಗಟ್ಟಿ ಭಾಗದ ಜನರಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕೆಎಂಎಫ ನಿರ್ದೇಶಕ ಶಂಕರ ಇಟ್ನಾಳ ಮಾತನಾಡಿ, ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದ್ದು ಗುಣಮಟ್ಟದ ಜತೆಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣ ಗೊಳಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಶಾಸಕ ವಿಶ್ವಾಸ ವೈದ್ಯ ಅವರನ್ನು ಗ್ರಾಮಸ್ಥರು, ಕಾರ್ಯಕರ್ತರು ಸನ್ಮಾನಿಸಿದರು.
ಮುಖಂಡ ವೆಂಕಣ್ಣ ಯರಡ್ಡಿ, ಕಲ್ಮೇಶ ಬಾಲರಡ್ಡಿ, ಮುತ್ತನಗೌಡ ನಾಯ್ಕರ, ಪುಟ್ಟು ಅರಳಿಕಟ್ಟಿ, ಬಸವರಾಜ ಗಿರೆಡ್ಡಿ, ರಮೇಶ ಅರಳಿಕಟ್ಟಿ, ಶಾಶಪ್ಪ ಗೋಪಾಳಿ, ಪ್ರವೀಣ ಯರಡ್ಡಿ, ಬಸು ತಳವಾರ, ಹನಮಂತ ಅರೇಬೆಂಚಿ, ಪ್ರಕಾಶ ಚೌರೆಡ್ಡಿ, ಶಿವನಗೌಡ ನಾಯ್ಕರ, ಶಂಕರ ಹುಬ್ಬಳ್ಳಿ, ತಿಪ್ಪಣ್ಣ ಕಡಬಿ, ಮಲನಾಯ್ಕ ನಾಯ್ಕರ, ಬಸವರಾಜ ಬನಪ್ಪನವರ, ಬಸಯ್ಯ ಅಟಿಗಲ್ಲ, ಸದಾ ಕುರಿ, ಮಹಾದೇವಯ್ಯ ಪೂಜೇರ, ಶಶಿಧರ ತಳವಾರ ಸುಭಾನಿ ಕುದರಿ, ಮಹಾಂತೇಶ ಉಪ್ಪಿನ, ಬಸನಾಯ್ಕ ಚಿಕಾಕಿ, ಪಡೆಪ್ಪ ನರಿ, ಆರ್.ಕೆ.ಪಟಾತ, ಪ್ರಕಾಶ ಮುರಗೋಡ ಸೇರಿದಂತೆ ಕಾರ್ಯಕರ್ತರು ಇದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 