ಅಭಿವೃದ್ದಿ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ

ಅಭಿವೃದ್ದಿ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ MLA Aihole drive for development work

ರಾಯಬಾಗ, 15 ; ಪ.ಜಾತಿ ಕಾಲೊನಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡುವುದರ ಮೂಲಕ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. 

ಮಂಗಳವಾರ ತಾಲೂಕಿನ ಚಿಂಚಲಿ ಪಟ್ಟಣದ ಅಜೀತ ನಗರ ಹಾಗೂ ಭಿರಡಿ ಗ್ರಾಮದ ಪ.ಜಾತಿ ಜನಪ್ರದೇಶದಲ್ಲಿ ಜಿ.ಪಂ.ಇಲಾಖೆಯ ಎಸ್‌.ಸಿ.ಪಿ.ಟಿ.ಎಸ್‌.ಪಿ ಯೋಜನೆಯಡಿ ಮಂಜೂರಾದ ಒಟ್ಟು 1 ಕೋಟಿ ರೂ. ಅನುದಾನದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.ಅಂಕುಶ ಜಾಧವ, ಸದಾಶಿವ ಘೋರೆ​‍್ಡ, ಮಹಾದೇವ ಬೋರಗಾಂವೆ,  ರಮೇಶ ಹಾರೂಗೇರಿ, ಲಕ್ಷ್ಮಣ ತುಳಸಿಗೇರಿ, ಸುಭಾಷ್ ಕೋರೆ, ರಾಜು ಮಹೇಶ್ವರಿ, ಮುರುಗೇಶ ನಿಶಾನದಾರ, ರಾಮಚಂದ್ರ ಮೈಶಾಳೆ, ಕಲ್ಮೇಶ ನಿಡವಣಿ, ಕೆಂಪಣ್ಣ ಮೈಶಾಳೆ, ಮಹಾದೇವ ಜೋಗಿ, ರಾಜು ಪೋಳ, ವಿಲಾಸ ಬಸನಾಯ್ಕ, ಸಹದೇವ ಯಡ್ರಾವಿ, ಕುಮಾರ ಖೋತ, ಬಾಹುಬಲಿ ಹಂಡೆಗೆ, ವಸಂತ ಕರಾಕಾಯಿ, ಕಿರಣ ಪಾಟೀಲ ಸೇರಿ ಅನೇಕರು ಇದ್ದರು.