ಹಿಡಕಲ್ಲ ಗ್ರಾಪಂ ಕಾರ್ಯಾಲಯದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ
Lord Mahavir Jayanti celebrated at Hidakalla Grama Office
ಲೋಕದರ್ಶನ ವರದಿ
ಪಾಲಬಾವಿ 30: ನೀನೂ ಬದುಕು ಇತರರನ್ನು ಬದುಕಲು ಬಿಡು ಎಂಬ ಅಹಿಂಸಾ ಪರವಾದ ಮಾತು ಜೈನ ಧರ್ಮದ ತಳಹದಿಯಾಗಿದೆ. ಸಕಲ ಜೀವಿಗಳ ಮೇಲೆ ದಯೆ ಹೊಂದಿ, ಈ ಜಗತ್ತಿನಲ್ಲಿ ಮನುಷ್ಯರಿಗೆ ಬದುಕಲು ಎಷ್ಟು ಹಕ್ಕು ಇದೆಯೋ ಹಾಗೆಯೇ ಎಲ್ಲ ಜೀವಿಗಳಿಗೂ ಹಕ್ಕಿದೆ ಎಂದು ಸಾರಿದ ಜೈನ ಧರ್ಮದ 24ನೆಯ ತೀರ್ಥಂಕರು. ಭಗವಾನ್ ಮಹಾವೀರರು ತಾವು ಕಂಡ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸಿದವರು. ದೊರೆಯ ಮಗನಾಗಿ ಸಕಲ ಐಶ್ವರ್ಯವನ್ನು ಅನುಭವಿಸುವ ಅವಕಾಶವಿದ್ದರೂ ಮಹಾವೀರರು ಎಲ್ಲವನ್ನು ಬಿಟ್ಟು ಕವಿವಾಣಿಯಂತೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬಂತೆ ಯುವರಾಜನಾಗುವ ಎಲ್ಲ ಅವಕಾಶವನ್ನು ಬದಿಗೊತ್ತಿ ತನ್ನ ಅರಿವನ್ನು ವಿಸ್ತರಿಸಲು ತಪಸ್ಸು ಮಾಡಿದರು ಭಗವಾನ್ ಮಹಾವೀರಾರು ಎಂದು ಆನಂದಿ ಹಿರೇಮಠ ಹೇಳಿದರು.ಸಮೀಪದ ಹಿಡಿಕಲ್ಲ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ (ಮಾ.30) ರಂದು ಮುಂಜಾನೆ 9ಗಂಟೆಗೆ ಭಗವಾನ್ ಮಹಾವೀರದ ಜಯಂತಿಯ ನಿಮಿತ್ಯ ಮಹಾವೀರರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಪುಂಡಲೀಕ ನಡಕಟ್ಟಿ, ಗ್ರಾಪಂ ಸಿಬ್ಬಂದಿ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 