ದಾನ ಧರ್ಮ ದಿಂದ ಜೀವನ ಸಾರ್ಥಕ: ಮರುಳಾರಾದ್ಯ ಸ್ವಾಮೀಜಿ

ದಾನ ಧರ್ಮ ದಿಂದ ಜೀವನ ಸಾರ್ಥಕ: ಮರುಳಾರಾದ್ಯ ಸ್ವಾಮೀಜಿ Life is meaningful through charity: Marularadya Swamiji

ಹೂವಿನಹಡಗಲಿ  30 : ಮನುಷ್ಯ ದಾನ ಧರ್ಮ .ಪರೋಪಕಾರಿ ಮಾಡುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಅಳವುಂಡಿ,ಹೊಳಗುಂದಿ ಕಟ್ಟಿಮನಿ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.  

ತಾಲ್ಲೂಕಿನ ಹೊಳಗುಂದಿ ಗ್ರಾಮದ ಊರಮ್ಮದೇವಿ ದೇವಸ್ಥಾನ ದಲ್ಲಿ ಸೋಮವಾರ 8ದಿನದ ದಸರಾ ಮಹೋತ್ಸವ ಪ್ರಯುಕ್ತ  ಶ್ರೀದೇವಿ ಪುರಾಣ ಪ್ರವಚನದಲ್ಲಿ ಸಾನಿದ್ಯ ವಹಿಸಿ ಮಾತನಾಡಿದ ಅವರು ದಾನ.ಧರ್ಮ, ಪರೋಪಕಾರಿ ಬೆಳೆಸಿಕೊಳ್ಳಬೇಕು ಎಂದರು.ಗತ ಕಾಲದಲ್ಲಿ ನಡೆಯುವ ವಿಚಾರ ಧಾರೆಗಳನ್ನು ಗ್ರಂಥ ಮೂಲಕ ಪುರಾಣಗಳು ಹೇಳಿದರೆ ,ಮಠ ಮಂದಿರ ನಿರ್ಮಾಣ ಶಾಸನಗಳು ತಿಳಿಸುತ್ತವೆ ಎಂದರು. 

ಪುರಾಣ ಪ್ರವಚನವನ್ನು ಪ್ರತಿ ದಿನ  ಹೆಚ್‌.ಎಂ.ಮಲ್ಲಿಕಾರ್ಜುನ. ಪಿ.ನಿತ್ಯಾನಂದ ಆಚಾರ್ಯ ಓದಿದರು.ಊರಮ್ಮ ದೇವಿ ದೇಗುಲ ಸಮಿತಿ ಅದ್ಯಕ್ಷ ಎನ್‌.ಎಸ್‌.ಸುರೇಶ್‌. ಕಾರ್ಯ ದರ್ಶಿ ಚಾವಡಿ ಮಂಜುನಾಥ. ಸದಸ್ಯ ರಾದ ಹೆಚ್‌.ಅಶೋಕ. ಸಂಗೀತ ಉಪನ್ಯಾಸಕ ಪೂಜಾರ ಬಸವರಾಜ. ತಬಲ ಸೋಗಿ ಶಿಕ್ಷಕ ಚಂದ್ರ​‍್ಪನಡೆಸಿಕೊಟ್ಟರು. ನಂತರಸೋಮೇಶ್ವರ ಭಜನಾ ಸಂಘ ಮತ್ತು ವೀರೇಶ್ವರ ಭಜನೆ ಸಂಘದವರು ಭಜನೆ ಮಾಡಿದರು. ಎಂ.ಪ್ರಕಾಶ, ಯು.ಶರತ್, ಎನ್‌.ಸಿದ್ದೇಶ.ಹೆಚ್‌.ಡಿ.ಸಂತೋಷ ಇದ್ದರು.