ಕೊಪ್ಪಳ 08: ಹಬ್ಬ ಹರಿದಿನಗಳಲ್ಲಿ ನಾವುಗಳು ಪರಸ್ಪರ ಭಾವೈಕ್ಯತೆಯನ್ನು ಬೆಳೆಸಿಕೊಂಡು ಹಬ್ಬಗಳ ಆಚರಣೆ ಮಾಡುವುದರ ಜೊತೆಗೆ ಸೌಹಾರ್ದತೆ ಬೆಳೆಸಿಕೊಂಡು ನಮ್ಮ ನಮ್ಮ ಬದುಕು ಕಟ್ಟಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ನಗರದ ಹಮಾಲರ ಕಾಲೋನಿ ಯಲ್ಲಿ ಕೋರಮ್ಮ ದೇವಿ ಜಾತ್ರಾ ಮಹೋತ್ಸವ ದ ಪ್ರಯುಕ್ತ ಏರಿ್ಡಸಿದ ರಕ್ತದಾನ ಮತ್ತು ಕಣ್ಣಿನ ನೇತ್ರ ಚಿಕಿತ್ಸೆ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು, ಮುಂದುವರಿದು ಮಾತನಾಡಿ ನಮ್ಮ ನಗರದ ಈ ಹಮಾಲರ ಕಾಲೋನಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ ಯಾವುದೇ ಹಬ್ಬ ಹರಿದಿನಗಳು ಬಂದಾಗ ಎಲ್ಲರೂ ಕೂಡಿಕೊಂಡು ಪರಸ್ಪರ ಸೌಹಾರ್ದತೆಯಿಂದ ಹಬ್ಬಗಳ ಆಚರಣೆ ಮಾಡುತ್ತೇವೆ.
ಇದು ಎಲ್ಲರಿಗೆ ಮಾದರಿ ಎಂದು ಅವರು ಬಣ್ಣಿಸಿದರು, ಹಬ್ಬಗಳಲ್ಲಿ ಸೋದರತ್ವ ಬಾಂಧವ್ಯ ದಿಂದ ನಡೆದುಕೊಂಡು ಬಂದಿರುವ ಇತಿಹಾಸ ನಮ್ಮ ಕಾಲೋನಿಯ ಜನರು ಮುನ್ನಡೆಸಿಕೊಂಡು ಬಂದಿದ್ದಾರೆ ಹಬ್ಬಗಳ ಆಚರಣೆ ಮೂಲಕ ನಮ್ಮ ನಾಡಿನ ಸಂಸ್ಕೃತಿ ಕಲೆಯ ಪರಂಪರೆ ಉಳಿಸಿಕೊಂಡು ಬರುವ ಕೆಲಸ ಎಂದು ಹೇಳಿದ ಅವರು ಇಂದಿನ ಈ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅದರಲ್ಲಿ ಬಡ ರೋಗಿಗಳಿಗೆ ಅನುಕೂಲವಾಗಲು ರಕ್ತದಾನ ಶಿಬಿರ ಮತ್ತು ಕಣ್ಣಿನ ನೇತ್ರ ಚಿಕಿತ್ಸಾ ಶಿಬಿರ ಏರಿ್ಡಸಿರುವುದು ಅತ್ಯಂತ ಮೆಚ್ಚುಗೆಗೆ ಪಾತ್ರ ವಾದ ಕೆಲಸ ಇದಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಅಭಿಪ್ರಾಯ ಪಟ್ಟರು, ಸಮಾರಂಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಹಾಗೂ ಕೊಪ್ಪಳದ ಹಿರಿಯ ಸಮಾಜ ಸೇವಕ ಸಿವಿ ಚಂದ್ರಶೇಖರ್, ಕೊಪ್ಪಳ ನಗರಸಭೆಯ ಉಪಾಧ್ಯಕ್ಷರಾದ ಅಶ್ವಿನಿ ಗದುಗಿನ ಮಠ ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ,ಪತ್ರಕರ್ತ ಸಂತೋಷ್ ದೇಶಪಾಂಡೆ, ಮಹಾಲಕ್ಷ್ಮಿ ಕಂದಾರಿ ,ಕೋರಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ವೇಣು ಲಡ್ಡು ,ಉಪಾಧ್ಯಕ್ಷ ದೇವಪ್ಪ ಚಿಗರಿ ಶಿವಾಜಿ ಗುದಗಿ ,ಹನುಮಂತಪ್ಪ ಬನ್ನಿಕೊಪ್ಪ, ನಾಗರಾಜ ಮೇಟಿ, ಬಶೀರ್ ಅಹ್ಮದ್ ಅತ್ತಾರ್, ಶರಣಪ್ಪ ಪಾಟೀಲ್ ಸೇರಿದಂತೆ ಅನೇಕರು ಹಾಗೂ ಬುಡ್ಡಪ್ಪ ಗೆಜ್ಜೆ ಹನುಮಂತಪ್ಪ ಕನ್ಯಾಳ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.