ಮಲೇರಿಯಾ ವಿರುದ್ಧದ ಹೋರಾಟಕ್ಕೆ ಶ್ರಮಿಸೋಣ: ಡಾ.ವಿನೋದ ಕುಮಾರ ಕರೆ
ಗಂಗಾವತಿ 25 ನಗರದ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಆಚರಣೆ ಮಾಡಲಾಯಿತು.ನಂತರ ಜಾತಕ್ಕೆ ಚಾಲನೆ ನೀಡಿ ಮಾತನಾಡಿದ ವೈದ್ಯರಾದ ಡಾ.ವಿನೋದ ಕುಮಾರ ಮಲೇರಿಯಾ ಎಂದರೇನು?ಮಲೇರಿಯಾವು ಕೆಲವು ಜಾತಿಯ ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಮಾರಕ ಕಾಯಿಲೆ ಯಾಗಿದೆ. ಇದು ಮುಖ್ಯವಾಗಿ ಉಷ್ಣವಲಯದ ದೇಶಗಳಲ್ಲಿ ಕಂಡು ಬರುತ್ತದೆ. ಇದನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು.ಅಪಾಯದ ಗುಂಪುಗಳು ಮತ್ತು ಲಕ್ಷಣಗಳು ತೀವ್ರ ಸೋಂಕಿನ ಅಪಾಯವು ಈ ಕೆಳಗಿನ ಜನರ ಗುಂಪುಗಳಲ್ಲಿ ಹೆಚ್ಚಾಗಿರುತ್ತದೆ. ಶಿಶುಗಳು, 5ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು, ಪ್ರಯಾಣಿಕರು ಮತ್ತು ಎಚ್ ಐ ವಿ ಅಥವಾ ಏಡ್ಸ್ ಪೀಡಿತರು ಮಲೇರಿಯಾದ ಸಾಮಾನ್ಯ ಆರಂಭಿಕ ಲಕ್ಷಣಗಳು ಜ್ವರ, ತಲೆನೋವು ಮತ್ತು ಶೀತ. ಸೋಂಕಿತ ಸೊಳ್ಳೆಯಿಂದ ಕಚ್ಚಿದ 10-15 ದಿನಗಳಲ್ಲಿ ಸಾಮಾನ್ಯವಾಗಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ರೀತಿಯ ಮಲೇರಿಯಾ ತೀವ್ರ ಅನಾರೋಗ್ಯ ಮತ್ತು ಸಾವಿಗೆ ಕಾರಣವಾಗಬಹುದು
ಇದರ ತೀವ್ರ ಲಕ್ಷಣಗಳು ಇವುಗಳನ್ನು ಒಳಗೊಂಡಿವೆ ತೀವ್ರ ಆಯಾಸ ಮತ್ತು ದುರ್ಬಲ ಪ್ರಜ್ಞೆ, ಬಹು ಸೆಳೆತಗಳು,ಉಸಿರಾಟದ ತೊಂದರೆಕಪ್ಪು ಅಥವಾ ರಕ್ತಸಿಕ್ತ ಮೂತ್ರ ಕಾಮಾಣಿ (ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು),ಅಸಹಜ ರಕ್ತಸ್ರಾವ ಸಂಭವಿಸಬಹುದು, ಆದ ಕಾರಣ ಮಲೇರಿಯಾ ತಡೆಗಟ್ಟುವಿಕೆ ಸೊಳ್ಳೆ ಕಡಿತವನ್ನು ತಪ್ಪಿಸುವುದರಿಂದ ಅಥವಾ ಓಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಮಲೇರಿಯಾವನ್ನು ತಡೆಗಟ್ಟಬಹುದು. ಸೊಳ್ಳೆ ಕಡಿತದಿಂದ ಮಲೇರಿಯಾ ಬರುವ ಅಪಾಯವನ್ನು ಕಡಿಮೆ ಮಾಡಬಹುದು, ಉದಾಹರಣೆಗೆ ಸೊಳ್ಳೆ ಪರದೆಗಳು ಮತ್ತು ರಕ್ಷಣಾತ್ಮಕ ಬಟ್ಟೆಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಸೂಕ್ತ ಎಂದು ಸಲಹೆಯನ್ನು ನೀಡಿದರು.ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ,ತಾಲ್ಲೂಕು ಹಿರಿಯ ನೀರಿಕ್ಷಣಾಧಿಕಾರಿ ವೀರಣ್ಣ,ತಾಲ್ಲೂಕು ಮಲೇರಿಯಾ ಮೇಲ್ವಿಚಾರಕರ ದೇವೇಂದ್ರಗೌಡ,ತಾಲ್ಲೂಕು ಆಶಾ ಮೇಲ್ವಿಚಾರಕರಾದ ಮಂಜುಳಾ,ಮಲೇರಿಯಾ ಲಿಂಕ್ ವರ್ಕ್ ರ ಹೆಚ್.ಸುರೇಶ,ರಮೇಶ ಸಲ್ಮನಿ,ಗುರುಪ್ರಸಾದ್,ಆರೋಗ್ಯ ಸಿಬ್ಬಂದಿಗಳಾದ ರೇಣುಕಾ,ನೀರಿಕ್ಷಣಾಧಿಕಾರಿಗಳು,ಸುರಾಕ್ಷೀತಾಧಿಕಾರಿಗಳು,ಮತ್ತು ಆಶಾ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು