ದಿ. 28ರಂದು ಉಪನ್ಯಾಸ ಮಾಲೆ-10 ಕಾರ‌್ಯಕ್ರಮ

ದಿ. 28ರಂದು  ಉಪನ್ಯಾಸ ಮಾಲೆ-10 ಕಾರ‌್ಯಕ್ರಮ Lecture series-10 program on 28th

ಲೋಕದರ್ಶನ ವರದಿ 

ಧಾರವಾಡ 27: ಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರೊ. ಎಸ್‌.ಎಲ್‌. ಸಂಗಮ ದತ್ತಿ ಅಂಗವಾಗಿ ದಿ. 28ರಂದು ಶನಿವಾರ ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಭಾರತೀಯ ಜ್ಞಾನ ಪರಂಪರೆ ಸಾಗಿ ಬಂದ ದಾರಿ’ ವಿಷಯ ಕುರಿತು ಉಪನ್ಯಾಸ ಮಾಲೆ-10 ಕಾರ‌್ಯಕ್ರಮ ಏರಿ​‍್ಡಸಿದೆ.  

ಧಾರವಾಡದ ವಿದ್ವಾಂಸರಾದ ಡಾ. ಶ್ರೀರಾಮ ಭಟ್ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. 

ಧಾರವಾಡದ ಗ್ರಂಥಾಲಯ ವಿಜ್ಞಾನಿ ಡಾ. ವಿನಾಯಕ ಬಂಕಾಪುರ ಮುಖ್ಯ ಅತಿಥಿಗಳಾಗಿ ಆಗಮಿಸುವರು.  

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷರಾದ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸುವರು.  

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ   ಪ್ರೊ. ಎಸ್‌.ಎಲ್‌. ಸಂಗಮ ಗೌರವ ಉಪಸ್ಥಿತರಿರುವರು.  

ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.