ಕಲಿಕೆ ಜ್ಞಾನ ಸಂಪಾದನೆಯ ಮೂಲ: ಡಾ.ಶಿವಾಜಿ ಜಾಧವ್

ಧಾರವಾಡ 01: ವಿದ್ಯಾಗಿರಿಯ ಜೆ.ಎಸ್‌.ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24 ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಏರಿ​‍್ಡಸಲಾಗಿತ್ತು.  

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ವಿಜ್ಞಾನಿ ಡಾ.ಶಿವಾಜಿ ಕೆ. ಜಾಧವ್ ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹ ನೀಡಿದರು. ಕಲಿಕೆ ಎಂದರೆ ಕೇವಲ ಯಾಂರ್ಕ್ ಗಳಿಸುವುದಲ್ಲ. ಅದು ಜ್ಞಾನ ಸಂಪಾದನೆಯ ಮೂಲ ಸಾಧನವೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳ ಸಾಧನೆಯು ಕೇವಲ ಪ್ರಶಸ್ತಿಗೆ ಸೀಮಿತವಾಗದೆ ಅದು ನಿರಂತರವಾಗಿ ಸಾಧನೆಯ ಶಿಖರವನ್ನು ಏರುವವರೆಗೂ ಮುಂದುವರಿಯಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲೆಯ ಪ್ರಾಚಾರ್ಯೆ ರೇಣು ವಿ. ಪಾಟೀಲ್, ಸಹ ಸಂಯೋಜಕಿ ನಿರ್ಮಲಾ ಪಾಟೀಲ್, ಸಾವಿತ್ರಿ ಗಾತಾಡೆ ಮತ್ತು ಕಮಲಾಕ್ಷಿ ಸಣ್ಣಕ್ಕಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ರಾಜೇಶ್ವರಿ ಹೆಚ್‌.ಎ ಅವರು ನಿರೂಪಿಸಿ ವಂದಿಸಿದರು.