ವಿಶೇಷ ಚೇತನರಿಗೆ ಸುಗಮ ಸಂಚಾರ ಅಭಿಯಾನಕ್ಕೆ ಚಾಲನೆ

Launch of smooth transportation campaign for the specially-abled

ಗದಗ 27: ವಿಶೇಷ ಚೇತನರಿಗೆ  ಅಡೆ ತಡೆರಹಿತ ವಾತಾವರಣವನ್ನು ಕಲ್ಪಿಸುವುದಕ್ಕೆ ಸರ್ಕಾರ ಬದ್ದವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು  ಹಾಗೂ ಸದಸ್ಯರ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಅಧ್ಯಕ್ಷರಾದ ಸಿ. ಎಸ್‌. ಶಿವನಗೌಡ್ರ ಅವರು ಹೇಳಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಆವರಣದಲ್ಲಿಜಿಲ್ಲಾ ಪಂಚಾಯತ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ  ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಗದಲ್ಲಿ ಸುಗಮ ಭಾರತಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದಅವರುಎಲ್ಲಾ ವಿಶೇಷ ಚೇತನರಿಗೆ ಸರ್ಕಾರಿ ಹಾಗೂ ಸಾರ್ವಜನಿಕ ಕಚೇರಿಗಳಿಗೆ ಭೇಟಿ ನೀಡಲು ಮುಕ್ತ ಅವಕಾಶ ನೀಡಲಾಗಿದೆ. ಅದಕ್ಕಾಗಿಕಚೇರಿ, ಶಾಲಾ-ಕಾಲೇಜುಗಳಲ್ಲಿ ರಾ​‍್ಯಪ್ ಅಳವಡಿಸಲು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ತಿಳಿಸುವೆ ಇದರಿಂದ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೂ ಹಾಗೂ ಗರ್ಭಿಣಿಯರಿಗೆ ಅನುಕೂಲವಾಗುವುದೆಂದುಎಂದು ಹೇಳಿದರು. 

ಜಿಲ್ಲಾ ವಿಕಲಚೇತನರಅಧಿಕಾರಿ ಮಹಾಂತೇಶ ಕೆ.ಚಾಲನೆ ನೀಡಿಎಲ್ಲಾ ಸಾರ್ವಜನಿಕ ಸರ್ಕಾರಿ ಖಾಸಗಿ ಕಟ್ಟಡಗಳಲ್ಲಿ ವಿಕಲಚೇತನವ್ಯಕ್ತಿಗಳಿಗೆ ಅಡೆತಡೆರಹಿತ ವಾತಾವರಣವನ್ನುಕಲ್ಪಿಸುವಕುರಿತು ಮಾತನಾಡಿದರು. 

ಇದೇ ಸಂದರ್ಭದಲ್ಲಿಎಬಿಡಿ ಸಂಸ್ಥೆಯ ಬೆಳಗಾವಿ ವಿಭಾಗದ ಸಂಯೋಜಕರುಅರ್ಚನಾದೇವತಿ ಹಾಗೂ ಜಿಲ್ಲಾ ಸಂಯೋಜಕರಾದ ಪ್ರತಿಭಾ ಮಾದರ, ಗದಗತಾಲೂಕಿನ ಸಂಯೋಜಕಖಾಜಾಹುಸೇನಕಾತರಕಿ, ಬಸವರಾಜ  ಓಲಿ,  ಶಿವಾನಂದ, ಶಶಿಕಲಾ ವಡ್ಡಟ್ಟಿ, ಭಾರತಿ ಹಾಗೂ  ಗದಗತಾಲೂಕಿನಎಲ್ಲಾಗ್ರಾಮೀಣ ವಿವಿಧೋದ್ದೇಶ ಪುನರ್ವಸತಿಕಾರ್ಯಕರ್ತರು ಉಪಸ್ಥಿತರಿದ್ದರು.