ಐಎಸ್ ಎಸ್ ಮಂಡಳಿಯಿಂದ ಭಾರತದ ಮೊದಲ ಸೂಕ್ಷ್ಮ ಗುರುತ್ವಾಕಾರ್ಷಣೆ ಪ್ರಯೋಗ ಪ್ರಾರಂಭ
ಬೆಂಗಳೂರು, ನ.18 : ಬಾಹ್ಯಾಕಾಶ ಜೈವಿಕ ತಂತ್ರಜ್ಞಾನ ಸ್ಟಾರ್ಟ್ ಆಫ್ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ (ಐಎಸ್ಎಸ್) ಮಂಡಳಿಯಿಂದ ಭಾರತದ ಮೊದಲ ಮೈಕ್ರೋಗ್ರಾವಿಟಿ ಪ್ರಯೋಗವನ್ನು ಪ್ರಾರಂಭಿಸಲಾಗಿದೆ ಎಂದು ಯೋಜನೆಯ ಮಾರ್ಗದರ್ಶಕ ಡಾ. ಶಶಿಧರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.2ರಂದು 9.59 ಇಟಿಯಲ್ಲಿ ಐಎಸ್ಎಸ್ ನ ಮಂಡಳಿಯು ಮೊದಲ ಮೈಕ್ರೊಗ್ರಾವಿಟಿ ಪ್ರಯೋಗವನ್ನು ಆಸ್ಟೋಮೆಡಾ ಸ್ಪೇಸ್ ಟ್ಯಾಂಗೋ ಸಹಯೋಗದೊಂದಿಗೆ ಆರಂಭಿಸಿದೆ. ಇದಕ್ಕಾಗಿ ಎನ್ ಜಿ- 12 ಉಪಗ್ರಹವನ್ನು ನಭೋಮಂಡಲಕ್ಕೆ ಹಾರಿಬಿಡಲಾಗಿದೆ ಎಂದರು.
ಬಾಹ್ಯಾಕಾಶದ ವಿಶಿಷ್ಟ ಮೈಕ್ರೋಗ್ರಾವಿಟಿ ಪರಿಸರದಲ್ಲಿ ಉತ್ಪನ್ನಗಳನ್ನು ಸಂಶೋಧಿಸಿ, ಅಭಿವೃದ್ಧಿಪಡಿಸುವ ಭಾರತದ ಮೊದಲ ಕೃಷಿ ಉತ್ಪನ್ನಗಳ ಪರಿಶೋಧಕ ಕಂಪನಿಯಾಗಿದೆ. ಅಲ್ಲದೇ ಸಂಶೋಧಕರಿಗೆ ಐಎಸ್ ಎಸ್ ನಲ್ಲಿ ತನ್ನ ಪಾಲುದಾರ ಸಂಸ್ಥೆಯ ಸಹಯೋಗದಿಂದ ಮಹತ್ವದ ಬಯೋಟೆಕ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಇದು ವೇದಿಕೆಯಾಗಿದೆ ಎಂದು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಅಕ್ಕಿ ಕೃಷಿಯಲ್ಲಿ ಪ್ರಮುಖ ಅಂಶವಿರುವ ಅನಾಬೆನಾ ಬ್ಯಾಕ್ಟೀರಿಯಾವನ್ನು ಆಸ್ಟೋಮೆಡಾ ಪರೀಕ್ಷಿಸುತ್ತದೆ ಮತ್ತು ಸ್ಥಿರ ಸಾರಜನಕದ ಶೇ.70ರಷ್ಟು ಭಾಗವನ್ನು ಭತ್ತದ ಬೆಳೆಗೆ ಬಿಡುಗಡೆ ಮಾಡುತ್ತದೆ. ಈ ಉಪಗ್ರಹ ಮೂರು ವಾರಗಳವರೆಗೆ ಬಾಹ್ಯಾಕಾಶದಲ್ಲಿ ಉಳಿದಿರುತ್ತದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 