ಕ್ರೀಡಾ ಸ್ಪರ್ಧೆಯಲ್ಲಿ ಭಾರತ ದೇಶದ ಪ್ರತಿನಿಧಿಸಿದ ಕುಮಾರ್ ಕುಪೇಂದ್ರ ಅವರ ಸನ್ಮಾನ

Kumar Kupendra, who represented India in a sports competition, was felicitated.

ಸಂಬರಗಿ, 16 :ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟ ಇವರ ಆಶ್ರಯದಲ್ಲಿ ಅಂತರರಾಷ್ಟ್ರೀಯ ಬಂಗಾಲ ದೇಶದಲ್ಲಿ ನಡೆದ ಅಟ್ಟಪಟ್ಟ ಕ್ರೀಡಾ ಸ್ಪರ್ಧೆಯಲ್ಲಿ ಭಾರತ ದೇಶದ ಪ್ರತಿನಿಧಿಸಿದ ಕುಮಾರ್ ಬಸುರಾಜ್ ಕುಪೇಂದ್ರ ಅವರ ಸನ್ಮಾನ ಕಾರ್ಯಕ್ರಮ ಮತ್ತು ಎಸ್‌ಎಸ್‌ಎಲ್‌ಸಿ ಪಿಯುಸಿ ಪರೀಕ್ಷೆಯಲ್ಲಿ 90ಅ ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜೂನ್ 18 ರಂದು ಗಚಿನ್ ಮಠದಲ್ಲಿ ಆಯೋಜಿಸಲಾಗಿದೆ ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಪಕ್ಷದ ಮಾಧ್ಯಮ ಪ್ರತಿನಿಧಿ ಮತ್ತು ಅಥಣಿ ಪುರಸಭೆಯ ಸದಸ್ಯರ ಆದ ರಾವಸಾಹೇಬ್ ಐವಾಳಿ ಹೇಳಿದರು.  

ತಾವಶಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಗಚಿನ್ ಮಠ ಅಥಣಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಮ ನಿ ಪ್ರ ಶಿವಬಸವ ಮಹಾಸ್ವಾಮಿಗಳು ಸುಕ್ಷೇತ್ರ ಶ್ರೀ ಗಚ್ಚನ ಮಠ ಅಥಣಿ, ಮರುಳಸಿದ್ಧ ಮಹಾಸ್ವಾಮೀಜಿ, ಬ್ರಹ್ಮಾನಂದ ಅಜನವರ ದಿವ್ಯ ಸಾನಿಧ್ಯ, ಅಧ್ಯಕ್ಷ ಸ್ಥಾನ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ವಯಸ್ಸುತಿದ್ದಾರೆ, ಉದ್ಘಾಟನೆ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ, ಸಂಸದ ಕುಮಾರಿ ಪ್ರಿಯಾಂಕ್ ಜಾರಕಿಹೊಳಿ, ಕರ್ನಾಟಕ ವಾಯುವ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಶಾಸಕ ರಾಜು ಕಾಗೆ, ಮಾಜಿ ಶಾಸಕ ಮಹೇಶ, ರಾಜೀವ್ ಗಾಂಧಿ ವಸ್ತಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾದ ಪರಶುರಾಮ ನಾಳಾಕರ, ಊರ ಸಭೆ ಅಧ್ಯಕ್ಷರಾದ ಶಿವಲೀಲಾ ಭೂಟಾಳಿ, ಉಪಾಧ್ಯಕ್ಷರಾದ ಭುವನೇಶ್ವರ ಯಂಕಚಿ, ಸದಾಶಿವ ಬುಟಾಳಿ, ಚಂದ್ರಕಾಂತ ಕದ್ರೋಳ್, ರಾಜೇಂದ್ರ ಐವಳೆ, ಶಂಕರ ಪೂಜಾರಿ, ರಮೇಶ ಶಿಂದಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದಾದರೂ ಸಮಾಜದ ಮುಖಂಡರು ಎಲ್ಲ ಗಣ್ಯರು ಉಪಸ್ಥಿತರಿರುವರು. ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ಅಥಣಿ ತಾಲೂಕಾ ಮಾದಿಗಿ ಹೋರಾಟ ಸಮಿತಿ ಅಧ್ಯಕ್ಷರು ಹನುಮಂತ ಅರ್ಧೂರ, ಸಂಬರಗಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಭಂಗರೇವ ಐವಳೆ, ವಿಠ್ಠಲ್ ಐವಳೆ, ಸದಾಶಿವ ಮಾಶಾಳೆ, ರಾಜು ದೊಡ್ಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.