ಕುಡತಿನಿ: ಮುಂಗಡ ಆಯ-ವ್ಯಯ ವರದಿ ಸಿದ್ಧತಾ ಸಭೆ
Kudathini: Advance Budget Report Preparation Meeting
ಬಳ್ಳಾರಿ 17: ಕುಡತಿನಿ ಪಟ್ಟಣ ಪಂಚಾಯಿತಿಯ 2026-27ನೇ ಸಾಲಿನ ಮುಂಗಡ ಆಯ-ವ್ಯಯ ವರದಿ ಸಿದ್ಧತೆ ಅಂಗವಾಗಿ ಶುಕ್ರವಾರ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸ್ವೀಕಾರಗೊಂಡ ಸಲಹೆ-ಸೂಚನೆ:
ಕುಡತಿನಿ ಪಟ್ಟಣದ 02 ನೇ ವಾರ್ಡ್ನಲ್ಲಿ ಚರ್ಚ್ ಹತ್ತಿರ ಉಳಿಕೆ ರಸ್ತೆ ಕಾಮಗಾರಿಯನ್ನು ಅಳವಡಿಸಿ ಪೂರ್ಣಗೊಳಿಸುವುದು. 02 ನೇ ವಾರ್ಡಿನಲ್ಲಿ ಈಗಾಗಲೇ ಮುಕ್ತಾಯವಾದ ರಸ್ತೆ ಕಾಮಗಾರಿ ಅಕ್ಕ ಪಕ್ಕ ಗ್ರಾವೆಲ್ ಹಾಕುವುದು. ಕೆರೆ ಹತ್ತಿರ 1 ಲಕ್ಷ ಲೀಟರ್ ಸಾಮರ್ಥ್ಯವುಳ್ಳ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡುವುದು. ಕನ್ನಡ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಗೆ ವಸತಿ ಕಲ್ಪಿಸಲು ಸೂಚಿಸಲಾಯಿತು.
09 ನೇ ವಾರ್ಡಿನಲ್ಲಿ ದುರಸ್ಥಿಯಲ್ಲಿದ್ದ ರಸ್ತೆಯನ್ನು ಅಗೆದು ಪೇವರ್ಸ ಹಾಕಲು ಕ್ರಮವಹಿಸುವುದು. ರಾಜ ಕಾಲುವೆಯಲ್ಲಿನ ಶೀಲ್ಟ್ ತೆಗೆಯಲು ಕ್ರಮವಹಿಸುವುದು. 18ನೇ ವಾರ್ಡಿನಲ್ಲಿ ಚಲುವಾದಿ ಕೇರಿಯಲ್ಲಿ ಜನಾಂಗದವರು ಕಾಯ್ದಿರಿಸಿದ 100*100 ಸ್ಥಳದಲ್ಲಿ ಗ್ರಂಥಾಲಯ ಅಥವಾ ಭವನ ನಿರ್ಮಾಣ ಮಾಡಲು ಸೂಚಿಸಿದರು.
ಬಳಿಕ ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕುಡತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಟ್ಟಣದ ಹಿರಿಯ ನಾಗರಿಕರು, ಪಟ್ಟಣದ ಮುಖಂಡರು ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 