ಕೃಷ್ಣಗೌಡ ಪಾಟೀಲರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Krishnagouda Patil launches various development works
ಗದಗ 10: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ 23 ನೇ ವಾರ್ಡಿನಲ್ಲಿ ಇದೇ ದಿನಾಂಕ 10 ರಂದು ಬೆಳ್ಳಿಗ್ಗೆ 11 ಘಂಟೆಗೆ ರಾಚೋಟೇಶ್ವರ ದೇವಸ್ಥಾನದ ಹತ್ತಿರದ ಮಾನ್ವಿಯವರ ಓಣಿಯ ರಸ್ತೆಯಿಂದ ಸರಕಾರಿ ಹಿರಿಯ ಮಾದರಿ ಶಾಲೆ ಯ ವರೆಗೂ ಬಡಾವಣೆಯ ನಾಗರಿಕರ ಬಹುದಿನಗಳ ಬೇಡಿಕೆಯಾದ ಒಳಚರಂಡಿ ( ಯು ಜಿ ಡಿ ) ಕಾಮಗಾರಿಯನ್ನು ವಾರ್ಡಿನ ಜನಪ್ರಿಯ ಉತ್ಸಾಹಿ ಗದಗ ಬೆಟಗೇರಿ ನಗರಸಭೆಯ ಸದಸ್ಯರು ಹಾಗೂ ಗದಗ ಜಿಲ್ಲಾ ಯೋಜನಾ ಸಮಿತಿಯ ಸದಸ್ಯರಾದ ಜನಾಬ್ ಬರಕತ ಅಲಿ ಮುಲ್ಲಾ ರವರ ನೇತೃತ್ವದಲ್ಲಿ, ಕಾಂಗ್ರೇಸ್ ಪಕ್ಷದ ಯುವ ನಾಯಕರು ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣಗೌಡ ಪಾಟೀಲ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಒಂದು ಅವಿಸ್ಮರಣೀಯ ಸುಸಂಧರ್ಭದಲ್ಲಿ ಬಡಾವಣೆಯ ಮುಖಂಡರಾದ ನಾಗಪ್ಪ ಗುಗ್ಗರಿ, ವಿರೂಪಾಕ್ಷಪ್ಪ ಅಕ್ಕಿ, ಪರಮೇಶ್ವಪ್ಪ ಜಂತಲಿ, ಮುತ್ತಣ್ಣ ರೋಣದ, ಸಿದ್ದಲಿಂಗಪ್ಪ ತುರಾಕಾಣಿ, ಬಸಣ್ಣ ಹತ್ತಿಶೆಟ್ಟರ, ಜಗದೀಶ್ ಗೌಡರ, ಸಿದ್ದಲಿಂಗಪ್ಪ ಕಮತರ, ರಾಜು ಜಕ್ಕನಗೌಡರ ಆಶೀಫ್ ಮುಲ್ಲಾ, ಶಾಬಾಜ್ ಮುಲ್ಲಾ, ಖಾದರ್ ಕಿರೆಸೂರ್, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, , ರಮೇಶ ಸತ್ಯಪ್ಪನವರ, , ಬಾಬು ಗುಳಗುಂದಿ, ಜಂಬಣ್ಣ ಮಲ್ಲಾಡದ, ಜೀವನಸಾಬ್ ನದಾಫ್, ಎಚ್ ಕೆ ಮುಲ್ಲಾ, ಅಲ್ಲಾಬಕ್ಷ ದೊಡ್ಡಮನಿ, ನಾಗೇಶ್ ರೇವಣಕರ, ಶೇಕವ್ವ ತೊಂಡಿಹಾಳ್, ಬೀಬಿಜಾನ್ ಬೇಲೆರಿ, ಮುಕ್ತುಮ್ ಸಾಬ್ ನಾಗನೂರ, ದಾವಲಸಾಬ್ ಖಾಜಾಮುಲ್ಲಾ, ಹಾಗೂ ಸಮಸ್ತ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 