ಕ್ರಿಕೇಟ್ ಟೂರ್ನಾಮೆಂಟ ಕಾರ್ಯಕ್ರಮ ಉದ್ಘಾಟಿಸಿದ ಕೃಷ್ಣಗೌಡ್ರ
Krishna Gowdra inaugurated the cricket tournament program
ಕ್ರಿಕೇಟ್ ಟೂರ್ನಾಮೆಂಟ ಕಾರ್ಯಕ್ರಮ ಉದ್ಘಾಟಿಸಿದ ಕೃಷ್ಣಗೌಡ್ರ
ಗದಗ 14: ಸವಿತಾ ಸಮಾಜವು ನೈಜ ಕಾಯಕ ವರ್ಗವಾಗಿದ್ದು, ಕಾಯಕದಲ್ಲಿ ಕೈಲಾಸ ಕಾಣುವ ಶ್ರಮಿಕರಾಗಿದ್ದಾರೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲರು ಹೇಳಿದರು ಅವರು ಗದಗ ಜಿಲ್ಲಾ ಸವಿತಾ ಸಮಾಜದಿಂದ ಹಮ್ಮಿಕೊಂಡ ಕ್ರಿಕೇಟ್ ಟೂರ್ನಾಮಿಂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರಿಕೇಟ್ ಆಡುವ ಮೂಲಕ ಉದ್ಘಾಟಿಸಿ ಮಾತನಾಡಿ ಕಾಯಕ ತತ್ವ ನಿಜವಾಗಿ ಪಾಲಿಸುತ್ತಿರುವ ಸಮುದಾಯ ಸವಿತಾ ಸಮಾಜ. ಜಗತ್ತಿಗೆ ಅತ್ಯಂತ ದೊಡ್ಡ ಕೊಡುಗೆ ಈ ಸಮಾಜ ನೀಡಿದೆ ಎಂದರು. ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ತನ್ನ ವೃತ್ತಿ ಬಿಡಬಾರದು, ಯಾವುದೇ ವೃತ್ತಿ ಕೀಳಲ್ಲ, ಕಾಯಕದಲ್ಲಿ ಶ್ರೇಷ್ಠತೆ ಕಾಣಬೇಕಾದರೆ ಶ್ರದ್ಧೆ, ಪ್ರಾಮಾಣಿಕತೆ ಇರಬೇಕು ಎಂದ ಅವರು ಸೌಂದರ್ಯ ಸಮಾಜ ನಿರ್ಮಾಣದಲ್ಲಿ ವೇದಗಳ ಕಾಲದಿಂದಲೂ ಕ್ಷೌರ ಸೇವೆ ಮಾಡುತ್ತಿರುವ ಸವಿತಾ ಸಮಾಜದ ಕಾರ್ಯ ಶ್ಲಾಘನೀಯ ಎಂದು ಬಣ್ಣಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ. ನಾಸೀರ ಮುಲ್ಲಾ. ಪರಶುರಾಮ (ಬಜ್ಜಣ್ಣ) ರಾಂಪೂರ. ಬಾಲರಾಜ ಕೊಟೇಕಲ್ಲ. ಅಬ್ದುಲಮುನಾಫ ಮುಲ್ಲಾ. ರಾಜು ಮಾನೆ. ದೀಪಕ ಮಾನೆ. ಪಾಂಡು ಕಾಳೆ. ವಿಕಾಸ ಕ್ಷೀರಸಾಗರ. ಸುಧೀರ ಮಾನೆ. ಪರಶುರಾಮ ಕೊಟೇಕಲ್ಲ. ಜಂಮ್ಮಣ್ಣ ಕಡಮೂರ. ರಮೇಶ ರಾಂಪೂರ ಪ್ರಮುಕರಾದ ಮಂಜುನಾಥ ಮಾನೆ. ತುಕಾರಾಮ ಮಾನೆ. ವಿಶಾಲ ಮಾನೆ. ಧಿನೇಶ ಕ್ಷೀರಸಾಗರ. ಹೇಮಂತ ವಡ್ಡೆಪಲ್ಲಿ. ಶ್ರೀನಿವಾಸ ಕೊಟೇಕಲ್ಲ. ಸುರೇಶ ಬುದೂರ. ಪರಶುರಾಮ ದಾವಣಗೇರಿ. ವಿಕ್ರಮ ಕ್ಷೀರಸಾಗರ. ಗಣೇಶ ಕಡಮೂರ. ಪ್ರಕಾಶ ಬುದೂರ. ಸುನೀಲ ರಾಯಚೂರ. ಕೃಷ್ಣಾ ಬುದೂರ. ವೆಂಕಟೇಶ ಕೊಟೇಕಲ್ಲ. ವಿಜಯ ಬುದೂರ. ತುಕಾರಾಮ ವಡ್ಡೆಪಲ್ಲೆ. ರಾಹೂಲ ಕೊಟೊಕಲ್ಲ. ಆದರ್ಶ ಮಾನೆ. ರಾಹೂಲ ಮೋಮ್ಮಗ. ವಿನಾಯಕ ರಾಯಚೂರ. ಹಾಗೂ ಸಮಾಜದ ನೂರಾರು ಬಾಂಧವರು ಉಪಸ್ತಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 