ಚಿತ್ರನಟನಾದ ಕೊಟ್ಟೂರಿನ ಪ್ರತಿಭೆ : ಡಾ: ಮುರುಳಿಧರ ಮನಸಾಲಿ

Kottoor's talent: Actor Dr. Murulidhara Manasali

ಕೊಟ್ಟೂರು 07 : ಕೊಟ್ಟೂರಿನ ಧೈತ ಪ್ರತಿಭೆ  ಮನಸಾಲಿ ಆಸ್ಪತ್ರೆಯ ಚಿಕ್ಕಮಕ್ಕಳ ವೈದ್ಯರಾದ ಡಾಕ್ಟರ್ ಮನಸಾಲಿ ಮುರುಳಿಧರ ರವರು ದೊಡ್ಮನೆ ಸೊಸೆ  ಚಿತ್ರಕ್ಕೆ ಪ್ರಮುಖ ಪಾತ್ರ ಮಾಡಲು ಅಯ್ಕೆಯಾಗಿದ್ದಾರೆ.  

ಶುಕ್ರವಾರ ಬೆಳ್ಳಿಗ್ಗೆ 10 ಗಂಟೆಗೆ ಬೆಂಗಳೂರು ನಗರದ ಶ್ರೀವಿಶ್ವವಿದ್ಯಾ ಗಣಪತಿ ದೇವಸ್ಥಾನ ಕೆಂಗೇರಿ ಉಪನಗರ ಗಣೇಶ ಆಟದ ಮೈದಾನ ರಿಂಗ್ ರಸ್ತೆಯಲ್ಲಿ ಮುಹೂರ್ತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ದೊಡ್ಮನೆ ಸೊಸೆ ಎಂಬ ಶೀರ್ಷಿಕೆಯೊಂದಿಗೆ ಪ್ರಾರಂಭವಾದ ಚಿತ್ರದಲ್ಲಿ, ಚಿತ್ರದ ನಿರ್ದೇಶಕರಾದ ಆಸ್ಕರ್ ಕೃಷ್ಣ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ, ಇದೊಂದು ಕೌಟಂಬಿಕ ಚಿತ್ರವಾಗಿದ್ದು ಅನೇಕ ಪ್ರಮುಖ ನಟರ ತಾರಬಳಗವೇ ಇದ್ದು , ಈ ಚಿತ್ರದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಮನಸಾಲಿ ಅಸ್ಪತ್ರೆಯ  ಮಕ್ಕಳ ತಜ್ಞರಾದ ಮನಸಾಲಿ ಮುರುಳಿಧರರವರು ಕಳೆದ ಒಂದು ವರ್ಷದಿಂದ ನಮಗೆ ಸಂಪರ್ಕದಲ್ಲಿದ್ದು, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ದೊಡ್ಡಮನೆ ಸೊಸೆ ಸಿನಿಮಾದಲ್ಲಿ ಪ್ರಮುಖ ಹಾಸ್ಯಪಾತ್ರವನ್ನು ಮಾಡಲು ನೀಡಿದ್ದು, ಅವರು ಪ್ರಖ್ಯಾತ ಹಾಸ್ಯನಟರಾಗಿ ಬೆಳೆಯುವುದಲ್ಲಿ ಸಂದೇಹವೇ ಇಲ್ಲವೆಂದರು  ಶ್ರೀಯುತರು ಕಳೆದ ಅನೇಕ ವರ್ಷಗಳಿಂದ ವೈದ್ಯರಾಗಿ ಮಾತ್ರವಲ್ಲದೇ ಶ್ರೀಗುರು ಕೊಟ್ಟೂರೇಶ್ವರ ರಸಮಂಜರಿ ಸಂಗೀತ ತಂಡವನ್ನು ಕಟ್ಟಿಕೊಂಡು ಗಾಯಕರಾಗಿ ಅನೇಕ ಸಾವಿರಾರು ಕಾರ್ಯಕ್ರಮ ನೀಡಿರುವುದಲ್ಲದೇ ಅನೇಕ ಪ್ರಮುಖ ನಟರ ಮಿಮಿಕ್ರಿ ಮಾಡುತ್ತಿದ್ದು , ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸಿನಿಮಾದಲ್ಲಿ ಅವಕಾಶ ನೀಡಿರುವುದಾಗಿ ಹೇಳಿದರು. 

ನೂತನ ಚಲನಚಿತ್ರದಲ್ಲಿ  ಹಾಸ್ಯನಟರಾಗಿ ಅಯ್ಕೆಯಾಗಿರುವ ಡಾ: ಮನಸಾಲಿ ಮುರುಳಿಧರ ಮಾತನಾಡಿ, ಆರಂಭದಲ್ಲಿ ನನಗೆ ಚಿತ್ರದಲ್ಲಿ ನಟಿಸಲು ಸ್ವಲ್ಪ ಭಯ, ಅತಂಕ ಇತ್ತು, ಅದರೆ ನಾನು ಈಗಾಗಲೇ ಸಾವಿರಾರು ರಸಮಂಜರಿ ಕಾರ್ಯಕ್ರಮವನ್ನು ಕಳೆದ ಅನೇಕ ವರ್ಷಗಳಿಂದ ಗ್ರಾಮಾಂತರ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ನೀಡುತ್ತಾ ಬಂದಿರುವುದರಿಂದ ಅದು ನನ್ನ ಸಹಾಯಕ್ಕೆ ಬಂತು, ಅಲ್ಲದೇ ಚಿತ್ರದ ನಿರ್ದೇಶಕರಾದ ಆಸ್ಕರ್ ಕೃಷ್ಣರವರು ನನಗೆ ಧೈರ್ಯ ತುಂಬಿ ಪ್ರಮುಖ  ಹಾಸ್ಯಪಾತ್ರ ನೀಡಿರುವುದರಿಂದ ಪಾತ್ರಕ್ಕೆ ನನ್ನ ಶಕ್ತಿ ಮೀರಿ ನ್ಯಾಯ ಒದಗಿಸುವುದಾಗಿ ತಿಳಿಸುತ್ತಾ, ಚಿತ್ರದ ನಿರ್ದೇಶಕರಿಗೆ ಪತ್ರಿಕೆ ಮೂಲಕ ಧನ್ಯವಾದ ಅರ​‍್ಿಸುವುರುದಾಗಿ ಹೇಳಿದರು. 

ದೊಡ್ಮನೆ ಸೊಸೆ ಚಿತ್ರದಲ್ಲಿ ದೊಡ್ಡ ತಾರಗಣ ಬಳಗವೇ ಇದ್ದು, ಹಿರಿಯ ನಿರ್ದೇಶಕರಾದ ಗೀರೀಶ್ ಕಾಸರವಳ್ಳಿ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ.ಹಾಗೂ ಹಿರಿಯ ನಿರ್ಮಾಪಕರಾದ ಉಮೇಶ್ ಬಣಕಾರ ಚಿತ್ರ ಸೂಪರ್ ಹಿಟ್ ಅಗಿ ಶತದಿನೋತ್ಸವ ಆಚರಿಸುವುದಲ್ಲಿ ಅನುಮಾನವೇ ಇಲ್ಲವೆಂದು ಹೇಳಿದ್ದಾರೆ, ಚಿತ್ರದಲ್ಲಿ ಹಿರಿಯ ನಟರಾದ ಸುಂದರ್‌ರಾಜ್ ಅಲ್ಲದೇ ಅನೇಕ ಹೊಸ ಪ್ರತಿಭೆಗಳ ಸಮಾಗಮವೇ ಇದ್ದು ,  ಕನ್ನಡ ಹೊಸ ಪ್ರತಿಭೆಗಳಾದ ಡಾ:ಮುರುಳೀಧರ ವಂಶಿ, ಮಮತಾ, ಸಚಿನ್ ಪುರೋಹಿತ್, ಚಿತ್ರದಲ್ಲಿದ್ದಾರೆ, ಚಿತ್ರತಂಡ ಅಲ್ ದಿ ಬೆಸ್ಟ್‌ ಎಂದು ಪತ್ರಿಕೆ ಕೂಡ ಹಾರೈಸಿದೆ.