ಕೊಂಕಣ ಮರಾಠರು ಉಪ ಜಾತಿಯ ಕಾಲಂನಲ್ಲಿ ಕುಣಬಿ ಬರೆಸಲು ಕರೆ
Konkan Marathas call for writing Kunabi in sub-caste column
ಕಾರವಾರ 19 : ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವೇಳೆ ಜಿಲ್ಲೆಯ ಕೊಂಕಣ ಮರಾಠ ಸಮಾಜದವರು ಜಾತಿಯನ್ನು ಕೊಂಕಣ ಮರಾಠ ಮತ್ತು ಉಪ ಜಾತಿಯನ್ನು ಕುಣಬಿ ಎಂದು ನಮೂದಿಸಬೇಕು ಎಂದು ಸಮಾಜದ ಧುರೀಣ ಜನಾರ್ಧನ ಗಾಂವ್ಕರ ಕರೆ ನೀಡಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊಂಕಣ ಮರಾಠ ಸಮಾಜವು ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಸ್ವಾಗತಿಸುತ್ತದೆ ಎಂದ ಅವರು ಮರಾಠಿ ಕುಣಬಿಗಳ ಭಾಷೆ ಮರಾಠಿ ಎಂದು ಬರೆಸಿ ಎಂದರು. ಈ ಹಿಂದೆ ಸರಕಾರವು ಮರಾಠ ಸಮುದಾಯ ಹಾಗೂ ಅದರ ಒಳ ಪಂಗಡಗಳಿಗೆ ಮೀಸಲಾತಿ ನೀಡಲು ಎನ್. ಶಂಕರಾ್ಪ ಅಧ್ಯಯನ ಆಯೋಗವನ್ನು ರಚಿಸಿತ್ತು. ಆದರೆ ಆಯೋಗವು ಕೊಂಕಣ ಮರಾಠ ಸಮುದಾಯವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.
ನಮ್ಮ ಸಮಾಜ ಪ್ರವರ್ಗ 3 (ಬಿ) ದಲ್ಲಿ ಇರುವ ಕಾರಣ ಸರಕಾರದ ಯಾವುದೆ ಸವಲತ್ತು ಸಿಗುತ್ತಿಲ್ಲ. ಹೀಗಾಗಿ ಸಮದಾಯದ ಜನಸಂಖ್ಯೆಯನ್ನು ನಿಖರವಾಗಿ ಸರಕಾರಕ್ಕೆ ತಿಳಿಸಲು ಕೊಂಕಣ ಮರಾಠ ಸಮಾಜದ ಪ್ರತಿಯೊಬ್ಬರು, ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಮಿಕ್ಷೆಯಲ್ಲಿ ಭಾಗವಹಿಸಬೇಕು ಎಂದರು. ಮುಖಂಡರಾದ ಗಜಾನನ ಆನಂದು ರಾಣೆ, ಅರುಣ ಗಾಂವ್ಕರ, ಆನಂದು ಗಾಂವ್ಕರ ಹಾಗೂ ರಾಹುಲ ನಾಯ್ಕ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 