ನಾಳೆಯಿಂದ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಆರಂಭ
Khasgateshwara Jatra Mahotsava begins tomorrow
ತಾಳಿಕೋಟೆ 18 : ಪಟ್ಟಣದ ಆರಾದ್ಯ ದೈವ, ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂಕೇತದ ಸ್ಥಳೀಯ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವವು ನಾಳೆ ಭಾನುವಾರ ಸಪ್ತ ಭಜನಾ ಪ್ರಾರಂಭದೊಂದಿಗೆ ಅಜ್ಜನ ಜಾತ್ರೆಗೆ ಚಾಲನೆ ದೊರೆಯಲಿದೆ. ಸಪ್ತ ಭಜನಾ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ಭಕ್ತಾದಿಗಳು, ಭಜನಾ ತಂಡಗಳು ಹಗಲು ರಾತ್ರಿ ಅವಿರತವಾಗಿ ಭಜನಾ ಸೇವೆ ಸಲ್ಲಿಸುವರು. ಮಠದ ಪೀಠಾಧಿಕಾರಿ ಸಿದ್ದಲಿಂಗ ದೇವರ ಅಧ್ಯಕ್ಷತೆಯಲ್ಲಿ ನಿತ್ಯ ಬೆಳಿಗ್ಗೆ 6 ಘಂಟೆಗೆ ಖಾಸ್ಗತೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾ ಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮವನ್ನು ವೇ.ವಿಶ್ವನಾಥ ವಿರಕ್ತಮಠ ನೆರವೇರಿಸುವರು.
ಮೊಸರು ಗಡಿಗೆ ಒಡೆಯುವುದು:ಜು.26ರಂದು ಶುಕ್ರವಾರ ಬೆಳಿಗ್ಗೆ 5.30 ಘಂಟೆಗೆ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮದೊಂದಿಗೆ ಸಪ್ತ ಭಜನಾ ಕಾರ್ಯಕ್ರಮ ಮಂಗಲಗೊಳ್ಳುವುದು. ಮ.12ಕ್ಕೆ ಮಹಾಪ್ರಸಾದ ವಿತರಣೆಯಾಗುವುದು. ಜುಲೈ27 ರಂದು ಸೋಮವಾರ ಬೆ. 8 ಗಂಟೆಯಿಂದ ಮಠದ ಪೀಠಾಧಿಕಾರಿ ಸಿದ್ಧಲಿಂಗದೇವರ ನೇತೃತ್ವದಲ್ಲಿ ಆನೆ ಅಂಬಾರಿ ಮೆರವಣಿಗೆಯು ಮಠದಿಂದ ಸಕಲ ವಾಧ್ಯ ವೈಭವಗಳೊಂದಿಗೆ ರಾಜವಾಡೆಯ ಭೀಮನ ಭಾವಿಯಲ್ಲಿ ಗಂಗಸ್ಥಳ ಪೂರೈಸಿ ಮರಳಿ ಪ್ರಮುಖ ಬೀದಿಗಳಲ್ಲಿ ಆನೆ ಅಂಬಾರಿ ಉತ್ಸವದೊಂದಿಗೆ ಮಠಕ್ಕೆ ತಲುಪುವುದು. ಅಂದೇ ಸಂಜೆ 4 ಗಂಟೆಗೆ ಖಾಸ್ಗತ ಮಹಾಶಿವಯೋಗಿಗಳ ಮಹಾರಥೋತ್ಸವ ಜರುಗುವುದು. ನಂತರ ಮಠದ ಸಿದ್ದಲಿಂಗ ದೇವರಿಂದ ಆಶೀರ್ವಚನ ಹಾಗೂ ರಾತ್ರಿ ಶಿವಭಜನೆ ಜರುಗುವುದು. ಜು. 29 ರಂದು ಬುಧವಾರ ಸಂಜೆ 4 ಘಂಟೆಗೆ ರಥದ ಕಳಸ ಇಳಿಸುವುದರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 