ಖಾಸ್ಗತ ಅಜ್ಜನ ಜಾತ್ರೆ: ವಿಶೇಷ ಪ್ರಸಾದ ವ್ಯವಸ್ಥೆ
Khasgateshwar Jatra Mahotsava
ತಾಳಿಕೋಟಿ 08: ಪಟ್ಟಣದ ಐತಿಹಾಸಿಕ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದ ಕೊನೆಯ ದಿನದ ಮಹಾ ರಥೋತ್ಸವ ಹಾಗೂ ಆನೆ ಅಂಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಮಾನಸಿಂಗ್ ಗೆಳೆಯರ ಬಳಗ ಹಾಗೂ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ವಿಶೇಷ ಬಜ್ಜಿ(ಬಜಿ) ಹಾಗೂ ಹುಳಿ ಚಟ್ನಿಯ ಪ್ರಸಾದದ ವ್ಯವಸ್ಥೆಯನ್ನು ಮಂಗಳವಾರ ಮಾಡಲಾಯಿತು.
ಪ್ರಸಾದ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖಂಡ ಮಾನಸಿಂಗ್ ಕೊಕಟನೂರ ಅವರು ಕಳೆದ 18 ವರ್ಷಗಳಿಂದ ನಿರಂತರವಾಗಿ ಅಜ್ಜನ ಜಾತ್ರೆಯಲ್ಲಿ ಪ್ರಸಾದ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಪ್ರತಿ ವರ್ಷವೂ ವಿಶಿಷ್ಟವಾದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುತ್ತೇವೆ. ಈ ಬಾರಿ ಎಲ್ಲರೂ ಇಷ್ಟಪಡುವ ಬಜಿ ಹಾಗೂ ಹುಳಿ ಚಟ್ನಿಯನ್ನು ಸಿದ್ಧಪಡಿಸಲಾಗಿತ್ತು. ಸುಮಾರು 5,000 ಭಕ್ತಾದಿಗಳಿಗೆ ಸಾಕಾಗುವಷ್ಟು ಪ್ರಸಾದ ವ್ಯವಸ್ಥೆ ಇರುತ್ತದೆ. ಖಾಸ್ಗತ ಅಜ್ಜ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ ಎಂದರು.
ಆನೆ ಅಂಬಾರಿಯಲ್ಲಿ ಖಾಸ್ಗತ ಹಾಗೂ ವಿರಕ್ತ ಅಜ್ಜನವರ ಭವ್ಯ ಮೂರ್ತಿಗಳ ಮೆರವಣಿಗೆಗೆ ಸ್ವಾಗತ ಕೋರಿ ಮುಖಂಡ ಮಾನಸಿಂಗ್ ಕೊಕಟನೂರ ಅವರು ಸಂಘದ ವತಿಯಿಂದ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಮಲ್ಲಿಕಾರ್ಜುನ ತರುಣ ಸಂಘದ ಪ್ರಕಾಶ ಹಜೇರಿ, ಮಹಾಂತೇಶ ಮರಾಳ, ಅಶೋಕ ಬಳಗಾನೂರ, ಶಿವಶಂಕರ ಹಿರೇಮಠ, ಇಬ್ರಾಹಿಂ ಮನ್ಸೂರ್, ಹಣಮಗೌಡ ಢವಳಗಿ, ತಿಪ್ಪಣ್ಣ ಸಜ್ಜನ್, ಮಲ್ಲು ಭಟ್, ಬಸವರಾಜ ಹೊಟ್ಟಿ, ಅಶೋಕ ಚಿನಗುಡಿ, ಅನಿಲ್ ಕುಂಬಾರ, ಸುಭಾಸ ಮಹೀಂದ್ರಕರ, ಸಂತೋಷ್ ಗ್ಯಾರಿ, ಸುಭಾಷ ಸಜ್ಜನ್, ಅನಿಲ್ ಕಸ್ತೂರಿ ರಮೇಶ ಮಾಲಿ ಪಾಟೀಲ, ಶಿವು ಲಿಂಗದಳ್ಳಿ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 