ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಿ: ಮೇಯರ್ ಜ್ಯೋತಿ ಪಾಟೀಲ್

ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಿ: ಮೇಯರ್ ಜ್ಯೋತಿ ಪಾಟೀಲ್ Keep children away from mobile phone use: Mayor Jyoti Patil

                    ಧಾರವಾಡ 03: ಮಕ್ಕಳ ಬೆಳವಣಿಗೆ ಮೊಬೈಲ್ ದೊಡ್ಡ ಮಾರಕವಾಗಿದೆ ಮತ್ತು ಅದೇ ಸಮಯದಲ್ಲಿ ಪೋಷಕರಲ್ಲಿಯೂ ಸಹ ವ್ಯಸನವಾಗಿದೆ ಎಂದು ಹು-ಧಾ ಮಹಾಪೌರರಾದ ಜ್ಯೋತಿ ಪಾಟೀಲ್ ಹೇಳಿದರು.   

                    ದಿನಾಂಕ: 03.12.2025ರಂದು ನಗರದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಸಹಯೋಗದೊಂದಿಗೆ ಮಕ್ಕಳ ಅಕಾಡೆಮಿ ಧಾರವಾಡ ಆಯೋಜಿಸಿದ್ದ ರಜತ ಮಕ್ಕಳೋತ್ಸವ-2025 ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿದ್ದ ಜ್ಯೋತಿ ಪಾಟೀಲರು ಮಾತನಾಡುತ್ತಾ. ಹಾಡುಗಾರಿಕೆ, ನೃತ್ಯ, ಚಿತ್ರಕಲೆ ಮುಂತಾದ ವಿವಿಧ ಕಲೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಮತ್ತು ಅವರ ಆಸಕ್ತಿಯ ಕ್ಷೇತ್ರದಲ್ಲಿ ಅವರನ್ನು ಪ್ರೋತ್ಸಾಹಿಸುವುದು, ಮೊಬೈಲಿನಿಂದ ದೂರವಿಡಲು ಉತ್ತಮ ಮಾರ್ಗವಾಗಿದೆ ಎಂದರು.    

                       ಧಾರವಾಡ ಮಕ್ಕಳ ಅಕಾಡೆಮಿಯ ಅಧ್ಯಕ್ಷ ಡಾ. ರಾಜನ್ ದೇಶಪಾಂಡೆ ಮಾತನಾಡುತ್ತ ಮಕ್ಕಳ ಅಕಾಡೆಮಿಯ ರಜತ ಮಹೋತ್ಸವದ ಅಂಗವಾಗಿ ಏರಿ​‍್ಡಸಿರುವ ರಜತ ಮಕ್ಕಳೋತ್ಸವವಾಗಿದ್ದು, ಪುಟ್ಟ ಮಕ್ಕಳಲ್ಲಿರುವ ಪ್ರತಿಭೆ, ಆತ್ಮವಿಶ್ವಾಸ ಮತ್ತು ಧೈರ್ಯವನ್ನು ನೋಡುವುದೇ ಅದ್ಭುತವಾಗಿದೆ. ಬಾಲ್ಯದಿಂದಲೇ ಮಕ್ಕಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದು ಪೋಷಕರ ಮತ್ತು ಶಿಕ್ಷಕರ ಕರ್ತವ್ಯವಾಗಿದೆ ಎಂದರು.   

           ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ್ ಬಬಲೇಶ್ವರ್ ಅವರು ಮಕ್ಕಳ ಅಕಾಡೆಮಿಯ ಪ್ರಯತ್ನಗಳನ್ನು ಶ್ಲಾಘಿಸಿದರು. ಇಡೀ ಜಗತ್ತು ನೋಡಬಹುದಾದ ಅತ್ಯುತ್ತಮ ಕೊಡುಗೆ “ಮಗುವಿನ ಆರೋಗ್ಯಕರ ನಗು”ಎಂದು ಅವರು ಹೇಳಿದರು. ಪ್ರತಿ ಮಗುವೂ ಪ್ರಕಾಶಮಾನವಾಗಿ ನಗುವಂತೆ ಮಾಡುವುದು ಮತ್ತು ಸಂತೋಷವಾಗಿರುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.   

                ಜ್ಯೋತಿ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು ಮತ್ತು ಅಂಜುಮನ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಬಡ್ತಿ ಪಡೆದಿದ್ದಕ್ಕಾಗಿ ಡಾ.ಎನ್‌.ಬಿ. ನಾಲತ್ವಾಡ್ ಅವರನ್ನು ಸನ್ಮಾನಿಸಲಾಯಿತು. ಗಜಾನನ ಮನ್ನಿಕೇರಿ, ಯೋಜನಾಧಿಕಾರಿ ಅಕ್ಕಮಹಾದೇವಿ ಮತ್ತು ಡಾ.ಎಂ.ವೈ. ಸಾವಂತ್ ವೇದಿಕೆಯಲ್ಲಿದ್ದರು.  

                 ಸತೀಶ್ ಪರ್ವತಿಕರ್ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಅಕಾಡೆಮಿ ಸದಸ್ಯರಾದ ಮಂಜುನಾಥ್ ಹಿರೇಮಠ,  ಅರವಿಂದ ದೇಶಮುಖ್, ಶ್ರೀಕಾಂತ್ ದೊಡವಾಡ್, ಐ.ಎಸ್‌.ಮಳೇಕರ, ಡಾ.ಬಾಳಪ್ಪ ಚಿನಗುಡಿ ಉಪಸ್ಥಿತರಿದ್ದರು, ಸಭಾಂಗಣವು ಮಕ್ಕಳು, ಪೋಷಕರು ಮತ್ತು ಶಿಕ್ಷಕರಿಂದ ಕಿಕ್ಕಿರಿದು ತುಂಬಿತ್ತು.   

       ವೇಷ ಭೂಷಣ ಸ್ಪರ್ಧೆಯ ವಿಜೇತರು.  ವಿಷ್ಣುಪ್ರಿಯ ತಡಕೋಡ, ಲಹರಿ ಶಿರೂರ, ರಾಗವಿ ನಾಗನೂರ ಪ್ರಥಮ ಸ್ಥಾನ, ಆರ್ಯ ಜಮಾದಾರ್ ಮತ್ತು ಬಿಬಿ ಬ್ಯಾಹಟ್ಟಿ ದ್ವಿತೀಯ ಸ್ಥಾನ, ಶ್ರೇಯಾ ಹಾಗೂ ಜೈನಲಾಬುದ್ಧಿನ ತೃತೀಯ ಸ್ಥಾನ, ಸೈಯದ್ ಹಾಗೂ ಇಶಾನ್ ಸಮಾಧಾನಕರ ಬಹುಮಾನ ಪಡೆದರು.   

             ಏಕವ್ಯಕ್ತಿ ನೃತ್ಯ ಸ್ಪರ್ಧೆಯ ವಿಜೇತರು  ಪ್ರಥಮ-ಅದ್ವಿತಿ ದೊಡಮನಿ, ದ್ವಿತೀಯ-ಸೋನಾಲಿಕಾ, ತೃತೀಯ-ದೀಕ್ಷಾ ಪಡೆಸೂರ ಹಾಗೂ ಸಮಾಧಾನಕರ-ಧ್ವನಿ ಹಾಗೂ ರಾಜೀವ್ ಗಾಂಧಿ ಶಾಲೆಯು ಅತ್ಯುತ್ತಮ ಶಾಲೆಯಾಗಿ ಆಯ್ಕೆಯಾಗಿದೆ.