ಅಧ್ಯಕ್ಷರಾಗಿ ಕಾಶೀಮಪಟೇಲ, ಉಪಾಧ್ಯಕ್ಷರಾಗಿ ಕಾಶಿನಾಥ ದೇಸಾಯಿ ಆಯ್ಕೆ
Kashima Patel elected as President, Kashinath Desai as Vice President
ಅಧ್ಯಕ್ಷರಾಗಿ ಕಾಶೀಮಪಟೇಲ, ಉಪಾಧ್ಯಕ್ಷರಾಗಿ ಕಾಶಿನಾಥ ದೇಸಾಯಿ ಆಯ್ಕೆ
ತಾಳಿಕೋಟಿ: ತಾಲೂಕಿನ ಹರನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಇದರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಶೀಮಪಟೇಲ ಹುಸೇನಪಟೇಲ ಪಾಟೀಲ, ಉಪಾಧ್ಯಕ್ಷರಾಗಿ ಕಾಶಿನಾಥ ಬಸನಗೌಡ ದೇಸಾಯಿ ಆಯ್ಕೆಯಾದರು. ಶುಕ್ರವಾರ ಸಂಘದ ಸಭಾಂಗಣದಲ್ಲಿ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಶೀಮಪಟೇಲ ಹುಸೇನ ಪಟೇಲ ಪಾಟೀಲ ಹಾಗೂ ನಿಂಗಪ್ಪ ಶಿವಪ್ಪ ನಾಗೂರ ನಾಮಪತ್ರ ಸಲ್ಲಿಸಿದ್ದರು. ಸಂಘದ ಒಟ್ಟು 12 ನಿರ್ದೇಶಕರೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಕಾಶೀಮಪಟೇಲ ಪಾಟೀಲ ಇವರಿಗೆ 8 ಮತಗಳು ಹಾಗೂ ನಿಂಗಪ್ಪ ನಾಗೂರ ಇವರಿಗೆ 4 ಮತಗಳು ಬಂದವು. 8 ಮತಗಳನ್ನು ಪಡೆದ ಕಾಶೀಮಪಟೇಲ ಪಾಟೀಲ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಶಿನಾಥ ಬಸನಗೌಡ ದೇಸಾಯಿ ಅವರ ಒಂದೇ ನಾಮಪತ್ರ ಸಲ್ಲಿಕೆ ಆಗಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ ಅವರು ಘೋಷಿಸಿದರು. ಸಂಘದ ಕಾರ್ಯನಿರ್ವಣಾಧಿಕಾರಿ ಕೆ.ಡಿ.ಪಾಟೀಲ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ ಕಾಶೀಮ ಪಟೇಲ ಪಾಟೀಲ ಮಾತನಾಡಿ ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೇವೆ ಅವರೆಲ್ಲರ ಸಹಕಾರ ಪಡೆದುಕೊಂಡು ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದರು.
ಚುನಾವಣಾ ಫಲಿತಾಂಶದ ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ನಿರ್ದೇಶಕರಾದ ಹಣಮಂತ್ರಾಯ ಹೂಗಾರ, ನಾಗಮ್ಮ ಹೂಕ್ರಾಣಿ(ಹಾದಿಮನಿ), ಅಲ್ಲಿಪಟೇಲ ಮಕಾಶಿ, ದುರ್ಗಪ್ಪ ದೊಡಮನಿ, ಮಹಾದೇವಪ್ಪಗೌಡ ಪಾಟೀಲ, ಮುಖಂಡರಾದ ಶಿವರಾಜ ಗುಂಡಕನಾಳ (ನಾಗೂರ), ಮಹಮ್ಮದಪಟೇಲ ಬಿರಾದಾರ,ಸಾಹೇಬಗೌಡ ಬಿರಾದಾರ,ಸಂಗನಗೌಡ ದೇಸಾಯಿ, ರಾಜಾಪಟೇಲ ಬಿರಾದಾರ, ಹೈದರಾಲಿ ಬಿರಾದಾರ(ಹಗರಗುಂಡ), ನಿರಂಜನಶಾ ಮಕಾನದಾರ, ಮೈನು ಮಕಾಶಿ, ಫಯಾಜ್ ಉತ್ನಾಳ, ಶಿವಪ್ಪ ಗೋನಾಳ ಹಾಗೂ ಅಭಿಮಾನಿಗಳು ಇದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರಿ್ಡಸಲಾಗಿತ್ತು. ಪಿ.ಎಸ್.ಐ.ಜ್ಯೋತಿ ಖೋತ್ ಸ್ಥಳದಲ್ಲಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 