ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
Karthika Dipotsava at Mallikarjuna Temple
ತಾಳಿಕೋಟಿ 28: ಪಟ್ಟಣದ ಅನಂತಪುರ ಪೇಟದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾಸಕಾಲ ನಡೆದ ಕಾರ್ತಿಕ ದೀಪೋತ್ಸವ ಸಮಾರಂಭವು ಸೋಮವಾರ ಮುಕ್ತಾಯವಾಯಿತು. ದೇವಸ್ಥಾನವನ್ನು ಬಣ್ಣದ ವಿದ್ದುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕಾರ್ತಿಕ ನಿಮಿತ್ತ ಮಾಸದ ನಿಮಿತ್ತ ಮಲ್ಲಿಕಾರ್ಜುನ ಭಜನಾ ಸಂಘದ ವತಿಯಿಂದ ನಿತ್ಯ ಪೂಜಾ ಕಾರ್ಯಗಳು ಭಜನೆ ದೀಪೋತ್ಸವ ಇತ್ಯಾದಿ ತಿಂಗಳ ಕಾಲ ನಡೆದು ಕೊನೆಯ ದಿನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕೇಸರಿ ಬಾತ್, ಪಲಾವ್ ಜೊತೆಗೆ ಅಂಬಲಿ ಪೇಯವನ್ನು ಭಕ್ತಾದಿಗಳಿಗೆ ಉಣಬಡಿಸಲಾಯಿತು.
ಅಧ್ಯಕ್ಷೆ ಬೋರಮ್ಮ ಕುಂಬಾರ, ಉಪಾಧ್ಯಕ್ಷೆ ನಿರ್ಮಲಾ ಕತ್ತಿ, ಶಾಂತಮ್ಮ ಹೊಟ್ಟಿ, ಮಾದೇವಿ ಕಸ್ತೂರಿ, ಬಸಮ್ಮ ಕಸ್ತೂರಿ, ದ್ರಾಕ್ಷಾಯಿಣಿ ದೇಗಿನಾಳ, ಗೀತಾ ಪಟ್ಟಣಶೆಟ್ಟಿ, ಸುಧಾ ಮಡ್ಡಿ, ಸಂಗೀತಾ ಗೋನಾಳ, ಅನ್ನಪೂರ್ಣ ಗೋನಾಳ, ಮಹಾದೇವಿ ಗೋನಾಳ, ಲತಾ ಮಡ್ಡಿ, ವಿದ್ಯಾ ಮಡ್ಡಿ, ಬೇಬಕ್ಕ ಬಳಗಾನೂರ ಇತರರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 