ಕರವೇ ಪ್ರವೀಣ್ ಶೆಟ್ಟಿ ಬಣ ತೊರೆದು ಶಿವರಾಮೇಗೌಡ ಬಣಕ್ಕೆ ಸೇರೆ್ಡ
Karave left the Praveen Shetty faction and joined the Shivaramegowda faction
ಕರವೇ ಪ್ರವೀಣ್ ಶೆಟ್ಟಿ ಬಣ ತೊರೆದು ಶಿವರಾಮೇಗೌಡ ಬಣಕ್ಕೆ ಸೇರೆ್ಡ
ಬೆಳಗಾವಿ 27: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಅಥಣಿ, ರಾಮದುರ್ಗ, ಖಾನಾಪೂರ ತಾಲೂಕಿನ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡಿ ಶಿವರಾಮೇಗೌಡ ಬಣಕ್ಕೆ ಸೇರೆ್ಡಯಾದರು. ಸೇರೆ್ಡಯಾದ ಕಾರ್ಯಕರ್ತರನ್ನು ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಅವರು ಸ್ವಾಗತಿಸಿ ಮಾತನಾಡಿ ಎಂ.ಇ.ಎಸ್ ಕರಾಳದಿನವನ್ನು ಆಚರಿಸಲು ಮುಂದಾದರೇ, ಅದೇ ಜಾಗದಲ್ಲಿ ಕರವೇ ಶಿವರಾಮೇಗೌಡ ಬಣದ ಹುಲಿಗಳು ಹೋಗಿ ರಾಜ್ಯೋತ್ಸವವನ್ನು ಆಚರಿಸಲಿವೆ. ಎಂ.ಇ.ಎಸ್. ಪುಂಡರನ್ನು ಹೊರ ಹಾಕಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲಿವೆ ಎಂದು ಹಿರೇಕೂಡಿ ಎಚ್ಚರಿಕೆಯನ್ನು ನೀಡಿದರು.
ನಮ್ಮ ಸಂಘಟನೆಯೂ ನೀಡಿದ ಬಲವನ್ನು ಪ್ರಯೋಗಿಸಿ ನಾಡು ನುಡಿ ರಕ್ಷಣೆಗಾಗಿ ಶ್ರಮಿಸಬೇಕು. ಈ ಬಾರಿ ಎಂ.ಇ.ಎಸ್. ಮತ್ತೇ ಕರಾಳ ದಿನವನ್ನು ಆಚರಿಸಿದರೇ, ಆ ಭಾಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಭೇಟಿ ನೀಡಿ, ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಜಿಲ್ಲಾಡಳಿತ ಕರಾಳ ದಿನಕ್ಕೆ ಅನುಮತಿ ನೀಡಿದರೇ, ತೀವ್ರ ಪ್ರತಿಭಟನೆಯನ್ನು ನಡೆಸುತ್ತೇವೆ. ಎಂ.ಇ.ಎಸ್. ಪುಂಡರನ್ನು ಹೊರ ಹಾಕುವ ಕೆಲಸವನ್ನು ಕರವೇ ಶಿವರಾಮೇಗೌಡ ಬಣದ ಹುಲಿಗಳು ಮಾಡಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿಲಿದ್ದೇವೆ. ಕರಾಳ ದಿನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದರೇ ಬೆಳಗಾವಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು. ಅಣ್ಣಾಸಾಹೇಬ್ ತೆಲಸಂಗ, ಮೊಹ್ಮದ್ ಸನದಿ, ಅಕೀಲಾ ಪಠಾಣ್, ರೇಷ್ಮಾ ಕಿತ್ತೂರ್, ವಿದ್ಯಾ ಸತ್ಯಾಯಗೋಳ, ಬಾಬು ಮಡಾಕರ, ಬಸವರಾಜ್ ಬೇಕಣಿ, ಮುನೀರ್ ಶಮಶೇರ್, ಶೌಕತ್ ಅಲಿ ಬಿಷಣ್ಣವರ, ಬಾಲಚಂದ್ರ ಹೂಲಿಕಟ್ಟಿ, ನಝೀರ್ ಹೊನ್ನಾಪೂರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 