ಜಾಂಭವ ಯುವ ಸೇನಾ ತಾಲೂಕಾಧ್ಯಕ್ಷರಾಗಿ ಕಾಲಪ್ಪ ಮಾದರ ಆಯ್ಕೆ
Kalappa Madara elected as Jambhava Yuva Sena Taluka President
ತಾಳಿಕೋಟಿ 18: ಜಾಂಭವ ಯುವಸೇನಾ(ರಿ) ತಾಳಿಕೋಟಿ ತಾಲೂಕಾಧ್ಯಕ್ಷರಾಗಿ ಹೋರಾಟಗಾರ ಕಾಲಪ್ಪ ಹಣಮಂತ ಮಾದರ(ಮಿಣಜಗಿ) ಇವರನ್ನು ಆಯ್ಕೆ ಮಾಡಲಾಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾಂಭವ ಯುವ ಸೇನಾ ಜಿಲ್ಲಾಧ್ಯಕ್ಷ ಬಸಲಿಂಗ ನಂದಿ ಇವರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕಾಲಪ್ಪ ಮಾದರ ಅವರ ಆಯ್ಕೆ ನಡೆಯಿತು. ನೂತನ ಅಧ್ಯಕ್ಷ ಕಾಲಪ್ಪ ಮಾದರ ಅವರಿಗೆ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ನಂದಿ ಅವರು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮಾದರಿಯಾಗಿಟ್ಟುಕೊಂಡು ಈ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಸಮಾಜದ ಹಿತ, ಅವರ ಹಕ್ಕುಗಳ ರಕ್ಷಣೆ, ಅವರ ಮೇಲಾಗುವ ದೌರ್ಜನ್ಯಗಳನ್ನು ತೊಡೆಯುವುದು ಇದರ ಉದ್ದೇಶವಾಗಿದೆ. ನಮ್ಮ ಸಂಘಟನೆ ಯಾರ ವಿರುದ್ಧವೂ ಅಲ್ಲ, ಶಾಂತಿ ಪೂರ್ಣ ಮಾರ್ಗಗಳನ್ನು ಅನುಸರಿಸಿ ಸಂಘಟನೆಯನ್ನು ಬಲಪಡಿಸಿ ಸಮಾಜದ ಹಿತಕ್ಕಾಗಿ ಎಲ್ಲರ ವಿಶ್ವಾಸದೊಂದಿಗೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾಜದ ಮುಖಂಡ ಸಾಹಿತಿ ಅಶೋಕ ಟಕ್ಕಳಕಿ ಮಾತನಾಡಿ ಯಾವುದೇ ಒಂದು ಸಮಾಜ, ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅಗತ್ಯ ಸಂಘಟನೆ ಮುಂದಾಳತ್ವ ವಹಿಸಿಕೊಂಡವರು ಪ್ರಾಮಾಣಿಕರಿದ್ದರೆ ಎಲ್ಲ ರಂಗದಲ್ಲಿಯೂ ಯಶಸ್ವಿಯಾಗಲು ಸಾಧ್ಯ, ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳದೆ ಸಮಾಜದ ಜನರ ಶ್ರೇಯೋಭಿವೃದ್ಧಿಗಾಗಿ ಬಳಸಬೇಕು ನ್ಯಾಯೋಜಿತವಾದ ಎಲ್ಲ ಹೋರಾಟಗಳಲ್ಲಿ ನಮ್ಮ ಸಂಪೂರ್ಣ ಬೆಂಬಲ ಇರಲಿದೆ ಎಂದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಕಾಲಪ್ಪಾ ಮಾದರ ಹಾಗೂ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ನಂದಿ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕಲ್ಲಣ್ಣ ಸೊನ್ನದ, ಹನುಮಂತ ಬಾಗೇವಾಡಿ, ಬಸವರಾಜ, ಕಾಶಿನಾಥ ಮಾದರ,ಯಮನಪ್ಪ ಮ್ಯಾಗೇರಿ, ತಾಯಪ್ಪ ಮ್ಯಾಗೇರಿ, ಮಹಾದೇವಪ್ಪ ನಾಗೂರ,ಅರುಣ್ ಚಲವಾದಿ, ಮಾಂತೇಶ ಮಾದರ,ಅಂಕುಶ್ ದೊಡ್ಡಮನಿ, ಗೌರೀಶ ಕಟ್ಟಿಮನಿ, ಕಾಶಿಪ್ಪ ಮಾದರ, ನಾಗರಾಜ ಕೊಡಗಾನೂರ, ನಾಗು ಮಾದರ, ಕೆ.ಎಸ್.ಮಾದರ, ಲಕ್ಷ್ಮಣ ಮಾದರ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 