ಬಳ್ಳಾರಿ ಸಂಸದ ತುಕಾರಾಂ ಸಹೋದರಿ ಪುಷ್ಪವತಿ ಮನೆಗೆ ಜನಾರ್ದನ ರೆಡ್ಡಿ ಭೇಟಿ

ಬಳ್ಳಾರಿ 19: ಸಂಡೂರಿನ ಮಾಜಿ ಶಾಸಕರು ಹಾಗೂ ಹಾಲಿ ಸಂಸದರಾದ ತುಕಾರಾಂ ಸಹೋದರಿ ಪುಷ್ಪವತಿ ನಾಗರಾಜ್ ಮನೆಗೆ ಇಂದು ಗಂಗಾವತಿ ಶಾಸಕ ಮತ್ತು ಸಂಡೂರು ಕ್ಷೇತ್ರದ ಉಪಚುನಾವಣೆ ಉಸ್ತುವಾರಿಯಾದ ಗಾಲಿ ಜನಾರ್ದನ ರೆಡ್ಡಿ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು.

ಗಾಲಿ ಜನಾರ್ದನ ರೆಡ್ಡಿ ಇಂದು ಸಂಡೂರು ಪಟ್ಟಣದಲ್ಲಿ ವಿಧಾನಸಭೆ ಉಪಚುನಾವಣೆ ಪ್ರಯುಕ್ತ ಗೃಹ ಕಚೇರಿಯ ಗೃಹಪ್ರವೇಶ ಕಾರ್ಯಕ್ರಮ ಪೂಜೆಗಳನ್ನು ನೆರವೇರಿಸಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ, ಮಾಜಿ ಸಚಿವ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ವಾಲ್ಮೀಕಿ ಜಯಂತಿಯ ವೇದಿಕೆಯಲ್ಲಿ ದುಃಖವನ್ನು ವ್ಯಕ್ತಪಡಿಸಿರುವುದು ಪಾಪ ಪ್ರಜ್ಞೆಯಿಂದ ಹೊರತು ಬೇರೆ ಏನು ಇಲ.ನಾಗೇಂದ್ರ ಈಗಾಗಲೇ ಅವನು ಡಸ್ಟ್‌ ಬೆನ್ನಿಗೆ ಬಿದ್ದ ವ್ಯಕ್ತಿ ಅವನ ವಿಷಯ ಎಲ್ಲಾ ನನಗೆ ಗೊತ್ತು, ಅವನು ನನಗೆ ಲೆಕ್ಕಕ್ಕೆ ಇಲ್ಲ ಅವನನ್ನು ನಾನೇ ರಾಜಕೀಯವಾಗಿ ಬೆಳೆಸಿದ್ದು ಎಂದು ವ್ಯಂಗ್ಯವಾಡಿದರು. ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ ಇದ್ದರೂ ನಮಗೆ ಅದ್ಯಾವುದು ಲೆಕ್ಕಕ್ಕಿಲ್ಲ ಪಕ್ಷದ ಚಿಹ್ನೆ ಕಮಲ ಗುರುತು ಮಾತ್ರ ನಮ್ಮ ಅಭ್ಯರ್ಥಿ ಅದಕ್ಕೆ ನಾವು ಮತಗಳನ್ನು ಹಾಕಿಸಿ ವಿಧಾನಸಭೆ ಉಪಚುನಾವಣೆಯನ್ನು ಗೆಲ್ಲುತ್ತೇವೆ ಎಂದು ತಿಳಿಸಿದರು.  

ನಾನು ರಾಜ್ಯದಲ್ಲಿ ಯಾವುದೇ ಗಣಿಗಾರಿಕೆಯನ್ನು ನಡೆಸುತ್ತಿಲ.್ಲ ಹೀಗಿದ್ದಾಗ ಅಕ್ರಮ ಗಣಿಗಾರಿಕೆ ನಡೆಸಿದ್ದೇನೆ ಎಂಬುದು ಶುದ್ಧ ಸುಳ್ಳು ನನಗೆ ಆಂಧ್ರ ಪ್ರದೇಶದ ಓಎಂಸಿ ಮಾತ್ರ ಗಣಿಗಾರಿಕೆ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ನಗರ ಮಾಜಿ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ, ಕೆ ಎಸ್ ದಿವಾಕರ್, ನಾನಾ ಸಾಹೇಬ್, ಬಂಗಾರು ಹನುಮಂತು, ಪಂಪಾಪತಿ, ಸೋಮನಗೌಡ, ಯರಿಸ್ವಾಮಿ, ಶರಣು, ಸೇರಿದಂತೆ ಹಲವಾರು ಜನರು  ಆಗಮಿಸಿದ್ದರು.