ಲೋಕಸಭಾ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಜಗದೀಶ್ ಶೆಟ್ಟರ ಭೇಟಿ, ಕಾಮಗಾರಿ ಪರೀಶೀಲನೆ

ಲೋಕಸಭಾ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಜಗದೀಶ್ ಶೆಟ್ಟರ ಭೇಟಿ, ಕಾಮಗಾರಿ ಪರೀಶೀಲನೆ Jagadish Shettar visits all villages under Lok Sabha constituency, inspects work

ಯರಗಟ್ಟಿ, 30 ; ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಸಾರ್ವಜನಿಕ ಹಾಗೂ ಕಾರ್ಯಕರ್ತರ ಕುಂದು ಕೊರತೆಗಳನ್ನು ಆಳಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ ನಂತರ ಮಾತನಾಡಿದ ಅವರು ಲೋಕಸಭಾ ವ್ಯಾಪ್ತಿಗೆ ಬರುವ ಎಲ್ಲಾಗ್ರಾಮಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದಿಂದ ಮಂಜೂರಾದ ಕಾಮಗಾರಿಗಳ ಪರೀಶೀಲನೆ ಮಾಡಲಾಗುವುದು ಮತ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಪ್ರತಿಮನೆಗೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. 

ಈ ವೇಳೆ ಮಾಜಿ ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣಾ ಚಂದರಗಿ, ಮಹಾಂತೇಶ ಜಕಾತಿ, ಕುಮಾರ ಹಿರೇಮಠ, ಶೇಷಪ್ಪ ಹಾದಿಮನಿ, ವೆಂಕಟೇಶ ದೇವರಡ್ಡಿ, ಈರಣ್ಣಾ ಮಠಪತಿ, ರಾಜೇಂದ್ರ ವಾಲಿ, ಮಡಿವಾಳಪ್ಪ ಬಿದರಗಡ್ಡಿ, ಡಾ. ಕೆ. ವ್ಹಿ. ಪಾಟೀಲ, ಚೇತನ ಜಕಾತಿ, ಸದಾನಂದ ಪಾಟೀಲ, ಗೀರೀಶ ಪಾಟೀಲ, ಸದಾನಂದ ಹಣಬರ, ಬಾಲಕೃಷ್ಣ ಹಡಪದ, ಅರುಣ ಪಟ್ಟೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.