ಜೆಡಿಎಸ್‌ಗೆ 25 ವರ್ಷ: ಬಿಜಾಪೂರದಲ್ಲಿ ಬೃಹತ್ ಜನತಾ ಸಮಾವೇಶ

ಜೆಡಿಎಸ್‌ಗೆ 25 ವರ್ಷ: ಬಿಜಾಪೂರದಲ್ಲಿ ಬೃಹತ್ ಜನತಾ ಸಮಾವೇಶ JDS turns 25: Huge public rally in Bijapur

ರಾಯಬಾಗ 14: ಪ್ರಾದೇಶಿಕ ಪಕ್ಷವಾಗಿ ಗುರುತಿಸಿಕೊಂಡಿರುವ ಜೆಡಿಎಸ್ ಪಕ್ಷ ಸ್ಥಾಪನೆಯಾಗಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜಾಪೂರದಲ್ಲಿ ಭವ್ಯ ಜನತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಜಿಲ್ಲೆಯ 18 ಮತಕ್ಷೇತ್ರಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು. ಪಕ್ಷದ ಸಾಧನೆಗಳು, ಭವಿಷ್ಯದ ಯೋಜನೆಗಳು ಮತ್ತು ರಾಜ್ಯ ರಾಜಕೀಯದ ದಿಕ್ಕು ಕುರಿತು ಸಮಾವೇಶದಲ್ಲಿ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಮಾತನಾಡಿ,ಸಮಾವೇಶ ಯಶಸ್ವಿಯಾಗಿಸಲು ಜಿಲ್ಲೆಯಿಂದ  ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಕಾರ್ಯಕರ್ತರಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಜೆಡಿಎಸ್ ಪಕ್ಷದ ಬಲವರ್ಧನೆಗೆ ಈ ಸಮಾವೇಶ ಮತ್ತಷ್ಟು ಉತ್ತೇಜನ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ, ಮುಖಂಡರಾದ ರಾಮು ರಜಪೂತ, ಜಿತೇಂದ್ರ ಯಮಕನಮರಡಿ,ರಶೀದ್ ತಾಂಬೋಳಿ, ಸದಾಶಿವ ಉಪ್ಪಾರ, ಹಾಲಪ್ಪ ವಂಟಮೂರೆ, ಇರ್ಫಾನ್ ತಾಂಬೋಳಿ, ಓಂಕಾರ ಶಾರಬಿದ್ರೆ, ಮಹೇಶ ವಂಟಮೂರೆ, ಸಂತೋಷ ಮಜ್ಜಗೆ, ಬೀರ​‍್ಪ ಶಾಂಡಗೆ, ಮಲ್ಲಿಕಾರ್ಜುನ ಕೊಟ್ರೆ, ಸುನೀಲ ಕಾಂಬಳೆ ಸೇರಿದಂತೆ ಇತರರು ಇದ್ದರು.