ದೇವಸ್ಥಾನದ ಉದ್ಘಾಟನಾ ಕಾರ‌್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ದೇವಸ್ಥಾನದ ಉದ್ಘಾಟನಾ ಕಾರ‌್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ Invitation letter for temple inauguration program released

ಬೆಳಗಾವಿ 13: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಐತಿಹಾಸಿಕ ರಾಯಣ್ಣನ ಸಂಗೊಳ್ಳಿ ಗ್ರಾಮದಲ್ಲಿ ಶ್ರೀ ಷ.ಬ್ರ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಗ್ರಾಮದೇವತೆಯರ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸಂಗೊಳ್ಳಿ ಹಿರೇಮಠ ಪೂಜ್ಯರು ಮಾತನಾಡಿ ಎಪ್ರೀಲ್ 20.ರಿಂರ 24 ರ ವರೆಗೆ ನಡೆಯುವ ಕಾರ್ಯಕ್ರಮ ರೂಪುರೇಷೆಗಳ ಸಂಪೂರ್ಣ ವಿವರಣೆ ನೀಡಿ ಈ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರು ಮಹಾಸನ್ನಿದಿಯವರು ಆಗಮಿಸುವರು ಹಾಗೂ ನಾಡಿನ ಎಲ್ಲಾ ಪೂಜ್ಯರ ಸಮ್ಮುಖದಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಶ್ರೀ ಗ್ರಾಮದೇವತೆಯರ ಕೃಪೆಗೆ ಪ್ರಾತ್ರರಾಗಬೆಕ್ಕೆಂದು ಹೇಳಿದರು. 

ಈ ಸಂದರ್ಭದಲ್ಲಿ ಗ್ರಾಮದೇವತೆ ದೇವಸ್ಥಾನದ ಜೀರ್ಣೋದ್ಧಾರ ಟ್ರಸ್ಟ್‌ ಕಮಿಟಿ ಅಧ್ಯಕ್ಷರಾದ ಬಸವರಾಜ ಕೊಡ್ಲಿ ಮಾತನಾಡಿ ಸಮಸ್ತ ಗ್ರಾಮಸ್ಥರ ತನು ಮನ ಧನ ಸಹಾಯ ಸಹಕಾರದಿಂದ ಈ ಭವ್ಯವಾದ ದೇವಸ್ಥಾನ ನಿರ್ಮಾಣವಾಗಿದೆ ಈ ದೇವಸ್ಥಾನದ ಉದ್ಘಾಟನೆ ಯನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ವಿಜೃಂಭಣೆಯಿಂದ ನೇರವೆಸಲು ವಿನಂತಿದರು.ಈ ಸಂದರ್ಭದಲ್ಲಿ ಸಮಸ್ತ ಸಂಗೊಳ್ಳಿ ಗ್ರಾಮಸ್ಥರು ಹಾಗೂ ಯುವಕರು ಪಾಲ್ಗೊಂಡಿದ್ದರು.