ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ

ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ Installation of the statue of Chowdeshwari Devi

ಹೂವಿನ ಹಡಗಲಿ 22 :   ಧಾರ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾನಸಿಕ ನೆಮ್ಮದಿ ದೊರಕುತ್ತದೆ ಎಂದು ಗವಿಮಠದ ಡಾ ಹಿರಿಶಾಂತವೀರ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಗವಿಮಠದ ಆವರಣದಲ್ಲಿ ಸೋಮವಾರ ಉತ್ಸವ ಸಮಿತಿ ಆಯೋಜಿಸಿದ್ದ ಶ್ರೀ ಚೌಡೇಶ್ವರಿ ದೇವಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಎಚ್ ಎಂ ಬೆಟ್ಟಯ್ಯ  ಮಾತನಾಡಿದರು. ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸಿಕೆಎಂ. ಬಸವಲಿಂಗ ಸ್ವಾಮಿ  ಕೋಡಿಹಳ್ಳಿ ಮುದುಕಪ್ಪ ,ಹಕ್ಕಂಡಿ ನಾಗಪ್ಪ ,ಅಲಂಕಾರ ವೀರೇಶ್ ,ರಾಚನಗೌಡ, ಎಚ್ ಎಂ ಪಟದಯ್ಯ, ವರ್ತಕರ ಸಂಘದ ಎಸ್ ಎಂ ಎನ್ ಅಶೋಕ್  ಇದ್ದರು.ಇದಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಚೌಡೇಶ್ವರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನ ಸ್ಥಳಕ್ಕೆ ತರಲಾಯಿತು.ಮಹಿಳೆಯರು ಭಕ್ತರು ದೇವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು.