ಲಕ್ಷ್ಮೀ ಮೂರ್ತಿ ಪ್ರತಿಷ್ಟಾಪನೆ

ಲಕ್ಷ್ಮೀ ಮೂರ್ತಿ ಪ್ರತಿಷ್ಟಾಪನೆ  Installation of Lakshmi idol

ಆಲಮೇಲ 26: ಇಲ್ಲಿನ ಡೋಹರ ಕಕ್ಯಯನ ಸಮಾಜ ಭಾಂದವರು ಲಕ್ಷ್ಮೀ ಮೂರ್ತಿ ಪ್ರತಿಷ್ಟಾಪನೆ ಹೋಮ-ಹವನ ಪೂಜಾ ಕೈಕಂರ‌್ಯ ನೆರವೇರಿಸಿ ದರ್ಶನ ಪಡೆದರು.  

ಪಟ್ಟಣದ ನಿವೃತ ಪೋಲಿಸ್ ಹವಾಲ್ದಾರ ಶಿವಣ್ಣ ನಾರಯಣಕರ ಲಕ್ಷ್ಮೀ ಮೂರ್ತಿಗೆ 35 ಸಾವಿರ ದೇಣಿಗೆ ನೀಡಿ ತಾಯಿಯ ಆಶೀರ್ವಾದ  ಪಡೆದರು. ಅನೇಕ ಮಹಿಳಾ ಭಕ್ತವೃಂದ ಗ್ರಾಮೀಣ ಸೊಗಡಿನ ದೇವಿಯ ಪದಗಳನ್ನು ಹಾಡಿ ಮನರಂಜಿಸಿ ದೇವರಲ್ಲಿ ಪ್ರಾರ್ಥಿಸಿದರು.  

ಬಳಿಕ ಡೋಹರ ಸಮಾಜ ಬಾಂಧವರು ಮೀಸಲಾತಿಯಲ್ಲಿ ನಮ್ಮ ಸಮಾಜ ಸೇರಿದ್ದರಿಂದ ಸಿಹಿ ವಿತರಿಸಿ ಸಂತಸ ವ್ಯಕ್ತಪಡಿಸಿದರು. ನಿವೃತ್ತ ಕಂದಾಯ ಅಧಿಕಾರಿ ಶಿವಾಜಿ ನಾರಯಣಕರ, ಅಶೋಕ, ಅಮರ, ಶರಣು, ದಯಾನಂದ, ಶ್ರೀಶೈಲ್, ಮಲಕಪ್ಪ,  ರಮೇಶ ಕಂದರೆ ಇದ್ದರು.