ಸಕ್ಕರೆ ಕಾರ್ಖಾನೆ ವೇ ಬ್ರಿಡ್ಜ್‌ ತಪಾಸಣೆ

 ಸಕ್ಕರೆ ಕಾರ್ಖಾನೆ ವೇ ಬ್ರಿಡ್ಜ್‌ ತಪಾಸಣೆ Inspection of Sugar Factory Way Bridge

ಲೋಕದರ್ಶನ ವರದಿ 

ಸಕ್ಕರೆ ಕಾರ್ಖಾನೆ ವೇ ಬ್ರಿಡ್ಜ್‌ ತಪಾಸಣೆ 

ವಿಜಯಪುರ ಅ.23:  ಕಾರಜೋಳ ಗ್ರಾಮದ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಇಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯವರಿಂದ ಕಾರ್ಖಾನೆಯಲ್ಲಿನ ವೇ ಬ್ರಿಡ್ಜ್‌ ಗಳನ್ನು ತಪಾಸಣೆ ಮಾಡಲಾಯಿತು.  

ಇತ್ತೀಚೆಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸೂಚನೆ ನೀಡಿದ ಹಿನ್ನಲೆಯಲ್ಲಿ ಬುಧವಾರ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಹಾಗೂ  ಕಾನೂನು ಮಾಪನ ಶಾಸ್ತ್ರ ಇಲಾಖೆಯ ಚೌಗಲಾ ಸೇರಿದಂತೆ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕರು ಮತ್ತು ರೈತ ಮುಖಂಡರ ಸಮ್ಮುಖದಲ್ಲಿ ಕಾರ್ಖಾನೆಯ ವೇ ಬ್ರಿಡ್ಜ್‌ ತಪಾಸಣೆ ಮಾಡಲಾಯಿತು 

ಈ ಸಂದರ್ಭದಲ್ಲಿ ರೈತ ಮುಖಂಡರಾದ ಪಡೆಯಪ್ಪ ಕೊಡೆಕಲ್ ಸೇರಿದಂತೆ ವಿವಿಧ ರೈತರು ಉಪಸ್ಥಿತರಿದ್ದರು.