ಭಾರತೀಯ ರೆಡ್ ಕ್ರಾಸ್ ಚುನಾವಣೆ: ಡಾ. ವ್ಹಿ.ಡಿ.ಡಾಂಗೆ ಪ್ಯಾನಲ್ಗೆ ಜಯ
Indian Red Cross Election: Dr. W.H.D. Dange panel wins
ಬೆಳಗಾವಿ 08: ಭಾರತೀಯ ರೆಡ್ ಕ್ರಾಸ್ ಚುನಾವಣೆಯಲ್ಲಿ ಡಾ. ವೆಂಕಣ್ಣ ಡಿ ಡಾಂಗೆಯವರ ನೇತೃತ್ವದ ಪ್ಯಾನಲ್ ಪೂರ್ಣ ಪ್ರಮಾಣದ ಜಯಗಳಿಸಿತು. ಅಕ್ಟೋಬರ 30ರಂದು ಜರುಗಿ ಫಲಿತಾಂಶ ನವೆಂಬರ್ 3ರಂದು ಘೋಷಿಸಲಾಯಿತು. ಡಾ. ವಿ.ಡಿ.ಡಾಂಗೆ, ಪ್ರವೀಣ ಹಿರೇಮಠ, ಪ್ರಿಯಾ ಪುರಾಣಿಕ, ಡಾ. ಸಂಜಯ ಸಿದ್ದಣ್ಣವರ, ಅಶೋಕ ಬದಾಮಿ, ದತ್ತಾತ್ರಯ ಮಿಸಾಳೆ, ರವೀಂದ್ರ ತೋಟಗೇರ, ಶಿವಬಸಪ್ಪ ಸಿದ್ನಾಳ, ಶಿವಾನಂದ ಮೂಲಿಮನಿ, ಲೆ. ಕರ್ನಲ್ ವಿನೋದಿನಿ ಶರ್ಮಾ ಆಯ್ಕೆಯಾಗಿದ್ದಾರೆ. ಬಿಮ್ಸ್ ಸಿ.ಇ.ಓ ಸಿದ್ದು ಹುಲ್ಲೋಳಿಯವರು ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಯಗಳಿಸಿದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಸಂಜೆ.7ಘಂಟೆಗೆ ಸಂಸ್ಥೆಯ ಕಛೇರಿಯಲ್ಲಿ ಕಾರ್ಯಕಾರಿ ಮಂಡಳಿ ಸಭೆ ಸೇರಿ ಡಾ. ವಿ.ಡಿ.ಡಾಂಗೆಯವರನ್ನು ಸರ್ವಾನುಮತದಿಂದ ಚೇರಮನ್ರಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ಡಾ. ಸಂಜಯ ಸಿದ್ದಣ್ಣವನವರ, ಕಾರ್ಯದರ್ಶಿಯಾಗಿ ಶಿವಾನಂದ ಮೂಲಿಮನಿ, ಖಜಾಂಚಿಯಾಗಿ ಲೆ. ಕರ್ನಲ್ ವಿನೋದಿನಿ ಶರ್ಮಾ, ಜಂಟಿ ಕಾರ್ಯದರ್ಶಿಯಾಗಿ ಪ್ರವೀಣ ಹಿರೇಮಠ, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ, ದತ್ತಾತ್ರಯ ಮಿಸಾಳೆ ಯವರನ್ನು, ನೇಮಕ ಮಾಡಲಾಯಿತೆಂದು ಚೇರಮನ್ ಡಾಂಗೆ ತಿಳಿಸಿದರು. ರಾಜ್ಯ ವೀಕ್ಷಕರಾಗಿ ಮಹಾಂತೇಶ ಮೀರಾಪುರ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 