ಸಮರ್ಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಶಾಖೆ ಉದ್ಘಾಟನೆ
Inauguration of the branch of the Samartha Multipurpose Friendly Cooperative Society
ಸಮರ್ಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಶಾಖೆ ಉದ್ಘಾಟನೆ
ಯರಗಟ್ಟಿ, 02 ;ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಘಗಳ ಪಾತ್ರ ಅಮೂಲ್ಯವಾದದ್ದು. ಇಂತಹ ಸಹಕಾರಿ ತತ್ವದ ಮೂಲಕ ಸಂಘ, ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿವೆ. ಪ್ರತಿ ಸಂಘ-ಸಂಸ್ಥೆಗಳ ಗುರಿ, ಉದ್ದೇಶಗಳನ್ನು ಅರಿಯುವ ಮೂಲಕ ಕಾರ್ಯಗತರಾಬೇಕು. ಕೂಲಿ ಕಾರ್ಮಿಕರ ಆರ್ಥಿಕ ಗುಣಮಟ್ಟ ಹೆಚ್ಚಿಸಲು ಸಾದ್ಯವಿದೆ. ಅದರಿಂದಾಗಿ ಸಹಕಾರ ಸಂಘಟನೆಗಳು ಪ್ರಬಲವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಸಹಕಾರಿ ಸಂಘಗಳು ಸದೃಢವಾಗಿ ಬೆಳೆಯಲು ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಜಿ.ಎಸ್. ಬಿಜಗುಪ್ಪಿಯವರು ಮಾತನಾಡಿದರು.
ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಸಮರ್ಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ.ಮೂಡಲಗಿ ಇವರ ಪ್ರಥಮ ಶಾಖೆಯನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ದಿವ್ಯಸಾನಿದ್ಯ ಶ್ರೀ ಸೋಮಾನಂದ ಭಾರತಿ ಮಹಾಸ್ವಾಮಿಗಳು ಶ್ರೀ ಸಿದ್ಧಾರೂಢ ಮಠ ಮುಗಳಿಹಾಳ, ಸಮರ್ಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ.. ಮೂಡಲಗಿ ಅಧ್ಯಕ್ಷರಾದಶ್ರೀ ದಾನಯ್ಯಾ ಶಿ. ಹಿರೇಮಠ, ಉಪಾಧ್ಯಕ್ಷರಾದ ಮಹಾಂತೇಶ ಕ. ಅಂಗಡಿ ಹಾಗೂ ಮುಗಳಿಹಾಳ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ರಾಮನಗೌಡ ಭೀ. ಗಂಗರಡ್ಡಿ, ಉಪಾಧ್ಯಕ್ಷರಾದ ಹಣಮಂತ ಅ. ದಳವಾಯಿ, ಶಿವಲಿಂಗಪ್ಪ ರಾ. ಅಕ್ಕಿಸಾಗರ, ಬಸಪ್ಪ ಫ. ಬಿ.ಪಾಟೀಲ, ವಿಠ್ಠಲ ಸಿ. ಹಾದಿಮನಿ, ಮುತ್ತೆಪ್ಪ ಪುಂ. ಕುರಿ, ಬಸವರಾಜ ಸಿ. ಬೆಲ್ಲದ, ಲಕ್ಷ್ಮಣಗೌಡ ವೆಂ. ಪಾಟೀಲ, ಮಹಾವೀರ ಬಾ. ಪೂಜೇರ, ಸುರೇಶ ಬ. ಕಡಕೋಳ, ವಿಜಯ ಕ. ಕುಲಗೋಡ, ಸಿದ್ದನಗೌಡ ಮ. ಪಾಟೀಲ, ಹಾಗೂ ಪ್ರಧಾನ ಕಚೇರಿಯ ಎಲ್ಲ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 