ಕೊಪ್ಪಳ 29: ನಗರದ ಹಿರೇ ಹಳ್ಳ ಖಲಂದರಿಯ ನಗರ್ ಬಡಾವಣೆಯಲ್ಲಿರುವ ಪುರಾತನ ಕಾಲದ ಐತಿಹಾಸಿಕ ಧಾರ್ಮಿಕ ಪ್ರಸಿದ್ಧ ಪಠಾ ನಿಯ ಮಸೀದಿಯಲ್ಲಿ ಮಸೀದಿ ಆಡಳಿತ ಮಂಡಳಿ ಮುಖ್ಯಸ್ಥ ಸೈಯದ್ ಮೈನುದ್ದಿನ್ ಕೊತ್ವಾಲ ಅಲಿಯಾಸ ಬಾಬುಸಾಬ್ ಮತ್ತು ಹಾಫಿಸ್ ಮೌಲಾನ ಇಬ್ರಾಹಿಂ ಸಾಹೇಬ್ ರವರ ನೇತೃತ್ವದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ರೋಜದಾರ್ ಮುಸ್ಲಿಂ ಬಾಂಧವರು ಮಸೀದಿಗೆ ಆಗಮಿಸಿ ತನ್ನ ಉಪವಾಸ ಬಿಡುವ ಕಾರ್ಯಕ್ರಮ ವಾದ ಇಫ್ತಾರ್ ಕೂಟ ದಲ್ಲಿ ಪಾಲ್ಗೊಂಡು ಬಳಿಕ ವಿಶೇಷ ಪ್ರಾರ್ಥನೆ ಸಾಮೂಹಿಕ ಪ್ರಾರ್ಥನೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ ದಿನದಿಂದ ದಿನಕ್ಕೆ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ರೋಜದಾರ್ ಬಾಂಧವರು ಪಠಾನೀಯ ಮಸೀದಿಗೆ ಆಗಮಿಸಿ ತನ್ನ ಉಪವಾಸ ಪೂರ್ಣ ಗೊಳಿಸುವುದು ಮಾಡುವವರು, ಎಲ್ಲರಿಗೂ ಬಹುತೇಕ ಪ್ರತಿದಿನ ಅನ್ನ ಸಂತರೆ್ಣ ವ್ಯವಸ್ಥೆಯನ್ನು ಹಲವು ಜನ ಸಮಾಜ ಸೇವಕರು ಮಾಡುತ್ತಾ ಬಂದಿರುವುದಕ್ಕೆ ಮಸೀದಿ ಕಮಿಟಿ ಮುಖ್ಯಸ್ಥ ಸೈಯದ್ ಮೈನುದ್ದೀನ್ ಹೋತ್ವಾಲ್ ಅಲಿಯಾಸ್ ಬಾಬುಸಾಬ್ ಮತ್ತು ಹಾಫಿಜ್ ಮೌಲಾನಾ ಇಬ್ರಾಹಿಂ ಸಾಹೇಬ್ ರವರು ಜಂಟಿಯಾಗಿ ಎಲ್ಲರನ್ನು ಅಭಿನಂದಿಸಿ ಶುಭ ಕೋರಿದ್ದಾರೆ.