ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಒತ್ತು-ಜನತೆಗೆ ತೆರಿಗೆ ಬರೆ…!
ಬೆಂಗಳೂರು, ಮಾರ್ಚ್.5, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಜನ ಸಾಮಾನ್ಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ನಲ್ಲಿ ಬರೆ ಎಳೆದಿದ್ದಾರೆ. ಪೆಟ್ರೋಲ್ ಮೇಲಿನ ದರವನ್ನು ಶೇ.32 ರಿಂದ 35ಕ್ಕೂ, ಡೀಸೆಲ್ ಮೇಲಿನ ತೆರಿಗೆ ದರವನ್ನು ಶೇ.21 ರಿಂದ 24ಕ್ಕೂ ಏರಿಕೆಯ ಪ್ರಸ್ತಾಪ ಮಾಡಲಾಗಿದೆ. ಇದೇ ಪರಿಣಾಮವಾಗಿ ಇನ್ನುಮುಂದೆ ಒಂದು ಲೀಟರ್ ಪೆಟ್ರೋಲಿಗೆ 1.60 ಪೈಸೆ, ಡೀಸೆಲ್ ಗೆ 1.59 ಪೈಸೆ ಹೆಚ್ಚಾಗಲಿದೆ. ಮದ್ಯದ ಮೇಲೆ ಹಾಲಿ ಇರುವ ತೆರಿಗೆ ಮೇಲೆ ಶೇ.6 ರಷ್ಟು ಹೊಸ ಅಬಕಾರಿ ತೆರಿಗೆ ವಿಧಿಸಲಾಗಿದ್ದು, ಪಾನಪ್ರತಿಯರಿಗೂ ಒಂದು ರೀತಿಯ ಕಸಿವಿಸಿ ಉಂಟುಮಾಡಿ, ಅವರ ಜೇಬಿಗೂ ನೇರ ಕೈ ಹಾಕಿದ್ದಾರೆ. ಮಂದಗತಿಯ ಆರ್ಥಿಕ ಹಿನ್ನೆಲೆಯ ಕಾರಣ ಹೊಸ ಸಂಪನ್ಮೂಲ ಕ್ರೂಢೀಕರಿಸಲು ಇರುವ ಸೀಮಿತ ಅವಕಾಶಗಳನ್ನು ಮುಖ್ಯಮಂತ್ರಿಗಳು ಬಳಕೆ ಮಾಡಿಕೊಂಡಿದ್ದಾರೆ. 2020-21ನೇ ಸಾಲಿನ ಆಸನ ಸಾಮರ್ಥ್ಯ 12ಕ್ಕಿಂತ ಹೆಚ್ಚು ಹಾಗೂ 20 ಆಸನಗಳನ್ನು ಮೀರದ ಪ್ರಯಾಣಿಕರನ್ನು ಕೊಂಡೊಯ್ಯುವ ಒಪ್ಪದದ ವಾಹನಗಳ ಪ್ರತಿ ಆಸನಕ್ಕೂ 900 ರೂಪಾಯಿ ಮೋಟಾರು ವಾಹನ ತೆರಿಗೆ ವಿಧಿಸಲಾಗಿದೆ. ಈ ಮೂಲಕ ಸಾರಿಗೆ, ಪೆಟ್ರೋಲ್ ಮತ್ತು ಅಬಕಾರಿ ವಲಯದ ಮೂಲಗಳಿಂದ ಹೆಚ್ಚಿನ ಆರ್ಥಿಕ ಸಂಪನ್ಮೂಲ ಸಂಗ್ರಹಣೆಗೆ ಮುಖ್ಯಮಂತ್ರಿಗಳು ಕೈ ಹಾಕಿದ್ದಾರೆ.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 