ಅಕ್ರಮ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡ ಹುಕ್ಕೇರಿ ಪೊಲೀಸರು
Hukkeri police seize illegal Annabhagya rice
ಹುಕ್ಕೇರಿ 03: ತಾಲೂಕಿನ ಬೆನಿವಾಡ ಗ್ರಾಮದಲ್ಲಿ ಪಿಕೆಪಿಎಸ್ ಸೊಸೈಟಿ ಹತ್ತಿರದಿಂದ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದಾರೆ ಅಂತ ಸಾರ್ವಜನಿಕರಿಂದ ಒಬ್ಬ ವ್ಯಕ್ತಿ ದೂರವಾಣಿ ಮೂಲಕ ಕರೆ ಮಾಡಿದ ತಕ್ಷಣ 112 ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ಪರೀಶೀಲನೆ ಮಾಡಿದಾಗ ಗೂಡ್ಸ್ ವಾಹನ ನಂಬರ್ ಕೆ ಎ 25 ಬಿ 1506 ವಾಹನದಲ್ಲಿ ಅಕ್ರಮವಾಗಿ ಅಕ್ಕಿಚೀಲ ಸುಮಾರು 46 ವಿವಿಧ ಬಣ್ಣದ ಬಾಯಿ ಕಟ್ಟಿದ ಚೀಲಗಳು ತುಂಬಿದ್ದು ಕಂಡು ಬಂದಿತು.
ತಕ್ಷಣ ಬೆನಿವಾಡ್ ದಿಂದ ಹುಕ್ಕೇರಿ ಪೊಲೀಸ್ ಠಾಣೆಗೆ ಕರೆತಂದು ವಾಹನ ಚಾಲಕ ಆರೋಪಿತನಾದ ನಿಂಗರಾಜ್ ಮಲ್ಲಪ್ಪ ಮುಗಳಿ ವಯಸ್ಸು 24 ಸಾಕಿನ್ ಬೆನಿವಾಡ್ ಹುಕ್ಕೇರಿ ಆಹಾರ ನೀರೀಕ್ಷಕರಾದ ಪ್ರವೀಣ್ ಕುಮಾರ್ ಸಾಗರ್ ಟೆಂಪೋ ದಲ್ಲಿನ 46 ಚೀಲಗಳನ್ನು ಪಂಚರ ಸಮ್ಮುಖದಲ್ಲಿ ಕೆಳಗಡೆ ಇಳಿಸಿ ತೂಕ ಮಾಡಿದಾಗ 1780 ಕೆಜಿ ಇರುತ್ತದೆ ಸುಮಾರು 35600=00 ರೂಪಾಯಿ ಅಂದಾಜಿಸಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಎಲ್ಲ ಚೀಲಗಳಿಂದ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಸ್ಯಾಂಪಲ್ ತೆಗೆದುಕೊಳ್ಳಲಾದ ಇಪ್ಪತ್ತು ಕೆಜಿ ತೆಗಿಸಿ ಅವುಗಳನ್ನು ಆಹಾರ ನೀರೀಕ್ಷಕರು ತನ್ನ ತಾಬೆಗೆ ತೆಗೆದುಕೊಂಡು ಇರುತ್ತದೆ. ಆರೋಪಿತನಾದ ಟೆಂಪೋ ಚಾಲಕ ನಿಂಗರಾಜ್ ಮಲ್ಲಪ್ಪ ಮುಗುಳಿ ವಾಹನ ಚಾಲಕನನ್ನು ಅಕ್ಕಿ ಎಲ್ಲಿಂದ ತರುವಿರಿ ಅಂತ ಕೇಳಿದಾಗ ಅವನು ಹತ್ತಿರದ ಊರುಗಳಲ್ಲಿ ಸಂತೆಗಳಲ್ಲಿ ಜನರಿಂದ ತೆಗೆದುಕೊಂಡು ಸಂಗ್ರಹಿಸಿ ಟೆಂಪೋ ಮುಖಾಂತರ ನೆರೆ ರಾಜ್ಯದ ಕೊಲ್ಲಾಪುರಕ್ಕೆ ಮಾರಾಟ ಮಾಡಲು ಹೂಗೊತ್ತಿದ್ದನೆಂದು ಖುದ್ದಾಗಿ ಹೇಳಿದನು. ಆರೋಪಿ ತನ್ನ ತಪ್ಪು ಒಪ್ಪಿಕೊಂಡಿರುತ್ತಾನೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 