ಶಾಸಕ ಗಣೇಶ ಸಮ್ಮುಖದಲ್ಲಿ ಹೊಸಕೋಟೆ ಜಗದೀಶ ಜನ್ಮದಿನಾಚರಣೆ

Hoskote Jagadeesh's birthday celebration in the presence of MLA Ganesh

ಕಂಪ್ಲಿ 12: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕರ ಸಭಾಂಗಣದಲ್ಲಿ ಶಾಸಕ ಜೆ.ಎನ್‌.ಗಣೇಶ ಅವರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆ ಬಳ್ಳಾರಿ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಅವರ ಜನ್ಮದಿನಾಚರಣೆನ್ನು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.  

ನಂತರ ಶಾಸಕ ಗಣೇಶ ಮಾತನಾಡಿ, ಜಗದೀಶ ಅವರು ಸಮಾಜ ಸೇವೆಯೊಂದಿಗೆ ಜನರ ಜೊತೆಯಲ್ಲಿದ್ದಾರೆ. ವೀರಶೈವ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಒಳ್ಳೆಯ ಸ್ಥಾನಗಳನ್ನು ಹೊಂದಲಿ. ಇವರ ಆಯಸ್ಸು, ಆರೋಗ್ಯವು ಸದಾ ಉಸಿರಾಗಿರಲಿ ಎಂದರು.  

 ಈ ಸಂದರ್ಭದಲ್ಲಿ ಮುಖಂಡರಾದ ಹೆಚ್‌.ಶಿವುಪುತ್ರ​‍್ಪ, ಮೆಟ್ರಿ ರಾಜ, ಹೆಚ್‌.ಶಂಕ್ರ​‍್ಪ, ಹೆಚ್‌.ಹಂಪಾರೆಡ್ಡಿ, ಬಟಾರಿ ಪ್ರಮೋದ್, ಎಂ.ಜಡೆಪ್ಪ, ಜಿ.ಗಣೇಶ, ಹರಿಜನ ಗಂಗಾಧರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.  ಅತಿಥಿ ಗೃಹ : ಇಲ್ಲಿನ ಅತಿಥಿ ಗೃಹದಲ್ಲಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ನೇತೃತ್ವದಲ್ಲಿ ಹೊಸಕೋಟೆ ಜಗದೀಶ ಅವರ ಹುಟ್ಟು ಹಬ್ಬ ಆಚರಿಸಲಾಯಿತು. ಈ ವೇಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ರಾಮಸ್ವಾಮಿ, ಮುಖಂಡರಾದ ಯಲ್ಲಪ್ಪ, ನಾಗರಾಜ, ಗಂಗಾಧರ ಇದ್ದರು.