ವಿವಾಹ ಮಹೋತ್ಸವದಲ್ಲಿ ಭಾಗಿಯಾದ ಗಣ್ಯರಿಗೆ ಸನ್ಮಾನ

ವಿವಾಹ ಮಹೋತ್ಸವದಲ್ಲಿ ಭಾಗಿಯಾದ ಗಣ್ಯರಿಗೆ ಸನ್ಮಾನ  Honors to the dignitaries who participated in the wedding celebrations

ಕೊಪ್ಪಳ 21 : ನಗರದ ನಿರ್ಮಿತಿ ಕೇಂದ್ರ ಬಡಾವಣೆಯಲ್ಲಿರುವ ಮಲ್ಲಂಗ್ ಸಾಬ್ ಸುಲ್ತಾನ್ ಸಾಬ್ ಮಕಾಂದಾರ್ ರವರ ಕುಟುಂಬದ ವಿವಾಹ ಮಹೋತ್ಸವ ವಲೀಮಾ ರಿಸೆಪ್ಶನ್ ಕಾರ್ಯಕ್ರಮ ಸೋಮವಾರ ಮಧ್ಯಾಹ್ನ ಜರುಗಿತು, ಇದರಲ್ಲಿ ಪಾಲ್ಗೊಂಡ ನಿರ್ಮಿತಿ ಕೇಂದ್ರದ ಖಾದ್ರಿಯ ಖಾನಖಾ ಕೇಂದ್ರದ ಪೀಠಾಧಿಪತಿ ಗುರುಗಳಾದ ಹಜರತ್ ಸೈಯದ್ ಅಬ್ದುಲ್ ವಹಾಬ್ ಮದಸಿರ್ ಪಾಷಾ ಖಾದ್ರಿ ಸಾಹೇಬ್ ಪೀರ್, ಯುಸೂಫಿಯ ಮಸೀದಿ ಪೇಶ ಇಮಾಮ್ ಮುಫ್ತಿ ಮೌಲಾನ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ, ಮೌಲಾನ ತಹಸೀನ್ ಖಾದ್ರಿ ನಕ್ಷ ಬಂದಿಹುಲ್ ಖಾದ್ರಿ ತಸ್ಕಿನಿ, ಹಾಗೂ ಹೋರಾಟಗಾರ ಎಂಡಿ ಯೂಸುಫ್ ಖಾನ್ ಸೇರಿದಂತೆ ಹಿರಿಯ ಪತ್ರಕರ್ತ ಸಾಧಿಕ್ ಅಲಿ ಯವರಿಗೆ ಸನ್ಮಾನಿಸಿ  ಅಭಿನಂದಿಸಲಾಯಿತು, ಇದೆ ವೇಳೆ ನೂತನ ವರ ಮೆಹಬೂಬ್ ಮಕಾಂದರ್ ಮತ್ತು ಅವರ ಸಹೋದರ ಕಾರಟಗಿಯ ಕುರುಬಳಾದ ಸೈಯದ್ ನೂರ್ ಪಾಶಾ  ಮಕಾನ್ ದಾರ ಸಾಹೇಬ್  ರವರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ಎಲ್ಲಾ ಗಣ್ಯರು ನೂತನ ವಧು ವರರಿಗೆ ಶುಭ ಹಾರೈಸಿದರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,