ಲಿಂಗಾಯತ ಪಂಚಮಸಾಲಿ ಸಮಾಜದಿಂದ ಸನ್ಮಾನ

ಮಹಾಲಿಂಗಪುರ 12 : ಪಂಚಮಸಾಲಿ ಮುಖಂಡರ ಸಮಾಜದ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ. ಸಮಾಜದ ಜೊತೆ ಸದಾ ತಾವಿದ್ದು ಸಮಾಜದ ಏಳ್ಗೆ ಮತ್ತು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ಪುರಸಭಾ ನೂತನ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು 

ಸ್ಥಳೀಯ ಗಡಾದಗಲ್ಲಿಯ ರಾಣಿ ಚನ್ನಮ್ಮ ಸಭಾಭವನದಲ್ಲಿ ಜರುಗಿದ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಾಧಕರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಸ್ಥಳೀಯ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಪುರಸಭಾ ನೂತನ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಬಾವಿಕಟ್ಟಿ, ಸಮೀಪದ ರನ್ನಬೆಳಗಲಿ ಪಪಂ ನೂತನ ಅಧ್ಯಕ್ಷೆ ರೂಪಾ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಾಂಗ್ಲಿಕರರನ್ನು ಸನ್ಮಾನಿಸಲಾಯಿತು. 

ಹಾಗೂ ಸಮಾಜ ಸೇವೆಗಾಗಿ ಮಲ್ಲೇಶಪ್ಪ ಮುಗಳಖೋಡ, ಶಿವಾನಂದ ಕನ್ನಾಳ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಪನಾ ಅನಿಗೋಳ, ನಿವೃತ್ತ ಶಿಕ್ಷಕ ಎಂ.ಬಿ.ಹಿಡಕಲ್, ಟ್ರಸ್ಟ್‌ನ ಹಿರಿಯ ಜಿ.ಜಿ.ಹುಬ್ಬಳ್ಳಿ ಇವರನ್ನೂ ಸನ್ಮಾನಿಸಲಾಯಿತು. 

ಪಂಚಮಸಾಲಿ ಸಮಾಜದ ಟ್ರಸ್ಟ್‌ ಅಧ್ಯಕ್ಷ ಡಾ.ಎ.ಆರ್‌.ಬೆಳಗಲಿ, ನಗರ ಘಟಕದ ಅಧ್ಯಕ್ಷ ಬಸಪ್ಪ ಕೊಪ್ಪದ, ಮುಖಂಡರಾದ ಶ್ರೀಶೈಲಪ್ಪ ಉಳ್ಳಾಗಡ್ಡಿ, ಈರ​‍್ಪ ದಿನ್ನಮನಿ, ಹನಮಂತ ಕೊಣ್ಣೂರ, ಡಾ.ಅಶೋಕ ದಿನ್ನಿಮನಿ, ಸಿದ್ದುಗೌಡ ಪಾಟೀಲ, ವಿಜುಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಹನಮಂತ ಶಿರೋಳ, ಆನಂದ ಖೋತ, ಮಹಾಲಿಂಗಪ್ಪ ಕಂಠಿ, ನಾಗಪ್ಪ ಖೋತ ಇತರರಿದ್ದರು.  

ಶಿಕ್ಷಕ ವಿಜಯಕುಮಾರ ಕುಳಲಿ ನಿರೂಪಿಸಿದರು.