ರಸ್ತೆ ಅಪಘಾತ: ಗಂಭೀರ ಗಾಯ

ರಾಣಿಬೆನ್ನೂರ:17 ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಕರೂರ ಗ್ರಾಮದ ಖಂಡೇರಾಯನಹಳ್ಳಿ ರಸ್ತೆಯಲ್ಲಿ ನಡೆದಿದೆ.  

ಮೃತನನ್ನು ತಾಲೂಕಿನ ಖಂಡೇರಾಯನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಧರ್ಮಮಪ್ಪ ಮಾದರ (16) ಗಂಭೀರ ಗಾಯಗೊಂಡವನ್ನು ಅದೇ ಗ್ರಾಮದ ಹೊನ್ನಪ್ಪ ರವಿ ಮಾದರ ಎಂದು ಗುರುತಿಸಲಾಗಿದೆ. ಖಂಡೇರಾಯನಹಳ್ಳಿಯಿಂದ ಕರೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಕುಮಾರಪಟ್ಟಣ ಪಿಎಸ್‌ಐ ಪ್ರವೀಣ ವಾಲೀಕಾರ ಪ್ರಕರಣ ದಾಖಲಿಸಿಕೊಂಡು ಡಿಕ್ಕಿ ಪಡಿಸಿದ ವಾಹನದ ಪತ್ತೆಗಾಗಾಗಿ ಬಲೆಬೀಸಿ ಅಪಘಾತ ಪಡಿಸಿದ ತಾಲೂಕಿನ ಐರಣಿ ತಾಂಡಾದ ಟ್ಯಾಕ್ಟರನ್ನು ಸೋಮವಾರ ವಸಪಡಿಸಿಕೊಂಡಿದ್ದಾರೆ.