ಹಾವೇರಿ22: ಇಂದಿನ ಜಾಗತೀಕ ಸಂದರ್ಭದಲ್ಲಿ ಕೇವಲ ಒಂದು ಪದವಿ, ಒಂದು ಕೋಸರ್್ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಗೆ ತಕ್ಕಂತೆ ವೃತ್ತಿಕೌಶಲ್ಯ ಪರಿಣಿತಿ ಹೊಂದಿದರೆ ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದು ಎಂದು ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಆವರಣದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಉದ್ಯೋಗಮೇಳ ಆಯೋಜಿಸಲು ಸಲಹೆ ನೀಡಲಾಗುವುದು. ಐ.ಟಿ.ಐ., ಡಿಪ್ಲೋಮಾ ಸೇರಿದಂತೆ ಬೇರೆ ಬೇರೆ ವಿದ್ಯಾರ್ಹತೆ, ವೃತ್ತಪರ ತರಬೇತಿ ಹಾಗೂ ಸೆಕ್ಯೂರಿಟಿ ಗಾಡರ್್, ನಸರ್್, ವಾಹನ ಚಾಲಕ ಹುದ್ದೆಯಂತ ಬಹು ಬೇಡಿಕೆಯ ಉದ್ಯೋಗಾವಕಾಶ ಕುರಿತಂತೆ ಉದ್ಯೋಗ ಮೇಳ ನಡೆಸಲು ಸಲಹೆ ನೀಡಲಾಗುವುದು ಎಂದು ಹೇಳಿದರು.
ದೇಶದಲ್ಲಿ ಶೇ.45ಕ್ಕೂ ಅಧಿಕ ಪ್ರಮಾಣದಲ್ಲಿ ಯುವಸಮೂಹವಿದೆ. ವೇಗವಾದ ಆಥರ್ಿಕತೆಯ ಬೆಳವಣಿಗೆಗೆ ಅನುಗುಣವಾಗಿ ಯುವ ಶಕ್ತಿಯನ್ನು ಬಳಸಿಕೊಂಡು ದೇಶದ ಆಥರ್ಿಕತೆ ಬಲವರ್ದನೆಗೊಳಿಸಬೇಕಾಗಿದೆ. ಯುವ ಶಕ್ತಿ ವರ್ತಮಾನದ ಬದುಕಟ್ಟಿಕೊಳ್ಳಲು ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಹಳೆಯ ಬ್ರಿಟಿಷ್ ಮಾದರಿಯ ಆಡಳಿತ ವ್ಯವಸ್ಥೆ ಬದಲಾಗಿದೆ. ಬದಲಾದ ಆಡಳಿತ ವ್ಯವಸ್ಥೆಗೆ ತಕ್ಕಂತೆ ತಾಂತ್ರಿಕ ಜ್ಞಾನವನ್ನು ಯುವಜನಾಂಗ ಗಳಿಸುವುದರ ಮೂಲಕ ಪ್ರಸ್ತುತ ಜಾಗತಿಕ ವ್ಯವಸ್ಥೆಗೆ ತಕ್ಕಂತೆ ಉದ್ಯೋಗ ಅವಕಾಶಗಳನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬದಲಾದ ಜಾಗತಿಕ ಕಾಲಘಟ್ಟಕ್ಕೆ ಅನುಗುಣವಾಗಿ ನಮ್ಮ ಕೌಶಲ್ಯಗಳು ಬದಲಾಗಬೇಕಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಬದಲಾಗಬೇಕಾಗಿದೆ. ಕೌಶಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದರೆ ಗ್ರಾಮೀಣ ವಿದ್ಯಾಥರ್ಿಗಳು ಉದ್ಯೋಗಾವಕಾಶ ಹೊಂದಲು ಸಾಧ್ಯವಾಗುತ್ತದೆೆ ಎಂದು ಹೇಳಿದರು.
ಕೈಯಲ್ಲಿನ ಗೆರೆ ಸವದರೆ ಹಣೆ ಮೇಲೆ ಗೆರೆ ಮೂಡುತ್ತದೆ. ಇಂದಿನ ಸಂದರ್ಭದಲ್ಲಿ ಕೆಲಸಮಾಡಲು ಬೇಕಾದ ಕೌಶಲ್ಯವನ್ನು ಹೊಂದುವುದರ ಮೂಲಕ ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ಹಣೆಬರಹದ ಮೇಲೆ ಬಾರಹಾಕದೆ ಪ್ರಯತ್ನಶೀಲರಾಗಿ ಯಶಸ್ಸು ಸಾಧಿಸಿ ಎಂದು ಹಾರೈಸಿದರು.
ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ ಮಾತನಾಡಿ, ವಿದ್ಯಾಥರ್ಿ ಜೀವನದಲ್ಲಿ ಸತತ ಪ್ರಯತ್ನವಿದ್ದರೇ ಯಶಸ್ಸು ಕಟ್ಟಿಟ್ಟಬುತ್ತಿ. ಯಾವುದೇ ಕೆಲಸ ದೊರೆತರು ಮನಸ್ಸಿನಿಂದ ಮಾಡಬೇಕು. ಯಾವುದೇ ಕೆಲಸ ಮೇಲು-ಕೀಳು ಎಂಬ ಭಾವನೆ ಇರಬಾರದು. ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ನೆಹರು ಓಲೇಕಾರ ಅವರು ಮಾತನಾಡಿ, ಯಾವುದೇ ಕೆಲಸ ಪಡೆಯಲು ನಿಮ್ಮ ವಿದ್ಯಾರ್ಹತೆಯ ಜೊತೆಗೆ ಕೌಶಲ್ಯಾಧಾರಿತ ತರಬೇತಿಗಳನ್ನು ಪಡೆಯಿರಿ. ಮೊದಲ ಹಂತದಲ್ಲಿ ಯಾವುದೇ ಕೆಲಸ ಸಿಕ್ಕರೂ ಆ ಕೆಲಸಮಾಡಲು ಸಿದ್ಧರಾಗಿ ಇದರಿಂದ ನಿಮಗೆ ವೃತ್ತಿನೈಪುಣ್ಯತೆ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಉನ್ನತ ಉದ್ಯೋಗ ಹೊಂದಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.
ನೊಂದಣಿ ವಿವರ: ಉದ್ಯೋಗ ಮೇಳದಲ್ಲಿ ಏಳು ಸಾವಿರ ಅಭ್ಯಥರ್ಿಗಳು ನೊಂದಾಯಿಸಿಕೊಂಡಿದ್ದಾರೆ. ಅಂದಾಜು 3,500 ಉದ್ಯೋಗಾವಕಾಶಗಳು ಲಭ್ಯವಿದ್ದು, ಮೊದಲ ದಿನ 2154 ಅಭ್ಯಥರ್ಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಎರಡು ದಿನ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಮೊದಲ ದಿನ 56 ಕಂಪನಿಗಳು ಭಾಗವಹಿಸಿದ್ದವು. ಉದ್ಯೋಗಾಕಾಂಕ್ಷಿಗಳಿಗೆ ನೊಂದಾವಣೆ, ಸಂದರ್ಶನಕ್ಕಾಗಿ 10 ಕೌಂಟರ್ಗಳನ್ನು ತೆರೆಯಲಾಗಿದ್ದು, ಐಟಿಐ ಕಾಲೇಜಿನ ಸಿಬ್ಬಂದಿಗಳು ಹಾಗೂ ಖಾಸಗಿ ಕೌಶಲ್ಯ ತರಬೇತಿ ಕೇಂದ್ರ ಸಿಬ್ಬಂದಿಗಳು ಅಭ್ಯಥರ್ಿಗಳಿಗೆ ತೊಂದರೆಯಾಗದಂತೆ ಮಾರ್ಗದರ್ಶನ ನೀಡುತ್ತಿದ್ದರು. ಮೊದಲಬಾರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿದವರಿಗೆ ಉದ್ಯೋಗ ಮೇಳದ ಆವರಣದಲ್ಲಿ ಮೃದು ಕೌಶಲ್ಯ ತರಬೇತಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಮಾರ್ಗದರ್ಶನ ನೀಡುವ ವ್ಯವಸ್ಥೆ ಸಹ ಮಾಡಲಾಗಿತ್ತು. ಎಲ್ಲ ಅಭ್ಯಥರ್ಿಗಳಿಗೆ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆ ಸಹ ಮಾಡಲಾಗಿತ್ತು. ಅಭ್ಯಥರ್ಿಗಳಿಗೆ ಯಾವುದೇ ಗೊಂದಲವಾಗದಂತೆ ಮಾರ್ಗಸೂಚಿ ಫಲಕಗಳು, ವಿದ್ಯಾಥರ್ಿಹತೆ ಹಾಗೂ ಕೌಶಲ್ಯಕ್ಕೆ ತಕ್ಕಂತೆ ಅಭ್ಯಥರ್ಿಗಳು ಕಂಪನಿಗಳನ್ನು ಆಯ್ಕೆಮಾಡಲು ಸ್ವತಂತ್ರ ಅವಕಾಶ ಮಾಡಲಾಗಿತ್ತು. ಪ್ರತಿ ಕಂಪನಿಗಳಿಗೆ ಉದ್ಯೋಗಿಗಳನ್ನು ಆಯ್ಕೆಮಾಡಿಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿ.ಪಂ ಸದಸ್ಯ ಬಸವನಗೌಡ ದೇಸಾಯಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿ.ಪಂ.ಸದಸ್ಯರಾದ ಸಿದ್ದರಾಜ ಕಲಕೋಟಿ, ವಿರುಪಾಕ್ಷಪ್ಪ ಕಡ್ಲಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ಜಿ ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್ ಯೋಗಿಶ್ವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಉಪನಿದರ್ೆಶಕ ರಾಜಾ ನಾಯ್ಕ್, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳಾದ ಸುಭಾಷ್ ಗೌಡರ ಇತರರು ಉಪಸ್ಥಿತರಿದ್ದರು