ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ Hemaraddi Mallamma Jayanti Celebration

ಲೋಕದರ್ಶನ ವರದಿ 

ಬೆಳಗಾವಿ, ಮೇ.11: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸದಾಶಿವ ನಗರದ ರೆಡ್ಡಿ ಭವನದಲ್ಲಿ ಶಿವಶರಣೆ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ ರೆಡ್ಡಿ ಸಂಘದ ಗೌರವಾಧ್ಯಕ್ಷರಾದ ಇಂದಿರಾ ಬಾಯಿ ಮಳಲಿ, ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮಳ್ಳೂರ, ರೆಡ್ಡಿ ಸಂಘದ ಉಪಾಧ್ಯಕ್ಷರಾದ ಕಾಂತು ಜಾಲಿಬೇರಿ, ರೆಡ್ಡಿ ಸಂಘದ ಟ್ರಸ್ಟ್‌ ನ ಸದಸ್ಯರಾದ ತಿಪ್ಪೇಸ್ವಾಮಿ, ಸಾಹಿತಿಗಳಾದ ಡಾ.ರೇಣುಕಾ ಕಠಾರಿ, ಶಶಿಕಲಾ ನಾಡಗೌಡರ ಹಾಗೂ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.