ಸುಳ್ಳು ಗ್ಯಾರಂಟಿಗಳಿಂದ ಬಡವರ ಅನ್ನಕ್ಕೆ ಕೈ
Helping the poor with false guarantees
ಆಲಮೇಲ 28: ರಾಜ್ಯ ಸರ್ಕಾರ ಇತ್ತೀಚಿಗೆ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಲು ಆರಂಭಿಸಿರುವುದು ಸರಕಾರದ ಸಂಪೂರ್ಣ ವಿಫಲತೆಯ ಜೀವಂತ ಸಾಕ್ಷಿ.ಈಗಾಗಲೇ ಬೊಕ್ಕಸ ಖಾಲಿಯಾಗಿರುವ ಪರಿಸ್ಥಿತಿಯಲ್ಲಿ. ಸುಳ್ಳು ಪಂಚೆ ಗ್ಯಾರಂಟಿಗಳ ಮೂಲಕ ರಾಜ್ಯವನ್ನು ದೇವಾಳಿ ಮಾಡಿದ ನಂತರ ಈ ಸರಕಾರ ಈಗ ಬಡವರ ಹೊಟ್ಟೆಗೆ ಕೈ ಹಾಕುವ ಮಟ್ಟಕ್ಕೆ ಇಳಿಯ ಬಹುಬಂದಿದೆ. ಇದು ಅತ್ಯಂತ ಖಂಡನಿಯ ಮತ್ತು ಸಂವೇಧನಾ ಶೀಲತೆಯ ಕೊರತೆಯ ಆಡಳಿತ.ಪಡಿತರ ಚೀಟಿ ಬಡ ಕುಟುಂಬಗಳಿಗೆ ಕೇವಲ ಒಂದು ದಾಖಲೆ ಅಲ್ಲ.ಅದು ಜೀವನ ಅನ್ನ ಬಾಳಿನ ಭರವಸೆ. ಇದೆನ್ನು ರದ್ದುಪಡಿಸುವ ಮೂಲಕ ಸರಕಾರ ಬಡವರನ್ನು ಮತ್ತಷ್ಟು ತೀವ್ರಗೊಳಿಸಲು ಕಾರಣವಾಗುತ್ತಿದೆ.
ಸರಕಾರ ನಿಭಾಯಿಸಲು ಆಗದೆ ಹೋದರೆ ರಾಜೀನಾಮೆ ಕೊಡಲಿ ಮನೆಗೆ ಹೋಗಲಿ.ಬಡವರ ಜೀವನದೊಂದಿಗೆ ಆಟ ಆಡುವ ಹಕ್ಕು ಯಾರಿಗೂ ಇಲ್ಲ. ಇನ್ನು ದುಃಖಕರ ಸಂಗತಿ ಏಕೆಂದರೆ. ಶ್ರೀಮಂತರ ಕಾರ್ಡಗಳನ್ನು ಅಚ್ಚುಕಟ್ಟಾಗಿ ಇಟ್ಟು ಬಹುತೇಕ ಬಡವರ ಕಾಡುಗಳನ್ನು ಮಾತ್ರ ರದ್ದು ಪಡಿಸುವುದು ಸರಕಾರದ ದ್ವಂದ್ವ ನಿಲುವಿನ ಹಾಗೂ ಅಸಮಾನತೆಯ ನೀತಿಯ ಸೃಷ್ಟಿ ನಿರ್ದೇಶನ. ಬಡಜನರ ಮೇಲಿನ ಈ ರೀತಿ ಅನ್ಯಾಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.ಇಷ್ಟು ದಿನ ಅದೃಷ್ಟ ಬರಗಾಲ. ಉದ್ಯೋಗ ಕೊರತೆ. ಕೃಷಿ ಸಂಕಷ್ಟ್ ಇದರ ಮೇಲೆ ಪಡಿತರ ರದ್ದು ಎಂಬ ನಿರ್ಧಾರ ಬಡವರ ಜೀವನದ ಮೇಲೆ ನೇರ ದಾಳಿ. ಈ ಕ್ರಮವನ್ನು ಸರಕಾರ ತಕ್ಷಣ ಹಿಂಪಡೆಯಬೇಕು. ಬಡವರ ಅನ್ನ ಹಾಗೂ ಅವರ ಹಕ್ಕು ಕಸಿದುಕೊಳ್ಳುವುದನ್ನು ಎಂದಿಗೂ ಸಹಿಸುವುದಿಲ್ಲ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 