ಪ್ರಜ್ವಲ ಟ್ರಸ್ಟ್ನಿಂದ ಬಡರೋಗಿಗೆ ಸಹಾಯ
Help for poor patient from Prajwala Trust
ಶಿರಸಿ 12: ಕ್ಯಾನ್ಸರ್ ಪೀಡಿತೆ ಹಾಗೂ ಹೃದಯ ರೋಗದಿಂದ ಬಳಲುತ್ತಿರುವ ಚವತ್ತಿಯ ಆಶಾದೇವಿ ಹೆಗಡೆ ಅವರ ಮನೆಗೆ ಪ್ರಜ್ವಲ ಟ್ರಸ್ಟ್ (ರಿ.), ಶಿರಸಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿದರಲ್ಲದೆ, ತೀರ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾದ ಆಶಾದೇವಿ ಅವರಿಗೆ ಸಾಂತ್ವನ ಹೇಳಿ ಓಷದೊಪಚಾರಕ್ಕಾಗಿ ಧನ ಸಹಾಯವನ್ನು ಮಾಡಿದರು.
ಪದಾಧಿಕಾರಿಯಾದ ಸರಸ್ವತಿ ಕಂಬಾರ ಅವರು ವೈಯಕ್ತಿಕವಾಗಿಯೂ ಧನ ಸಹಾಯ ನೀಡಿದರು. ಅಧ್ಯಕ್ಷೆ ಬಿಂದು ಹೆಗಡೆ, ಮುದ್ರೆ, ಪ್ರಾಣಾಯಾಮ, ಆಧ್ಯಾತ್ಮ ಚಿಂತನೆಗಳ ಬಗೆಗೆ ತಿಳುವಳಿಕೆ ನೀಡಿದರು.ಟ್ರಸ್ಟಿನ ನಿಕಟವರ್ತಿಗಳೂ, ಕಲಾವಿದರೂ, ತಬಲಾವಾದಕರೂ ಆದ ಕಿರಣ ಹೆಗಡೆ ಕಾನಗೋಡ ಅವರು ಈ ಸೇವಾ ಕಾರ್ಯವನ್ನು ಆಯೋಜಿಸಿದ್ದರು.ಟ್ರಸ್ಟಿನ ಅಧ್ಯಕ್ಷರಾದ ಬಿಂದು ಹೆಗಡೆ, ಕಾರ್ಯದರ್ಶಿ ಸುಮಾ ಹೆಗಡೆ, ಸರಸ್ವತಿ ಕಂಬಾರ, ಸುಜಾತಾ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 