ಪ್ರಜ್ವಲ ಟ್ರಸ್ಟ್ನಿಂದ ಬಡರೋಗಿಗೆ ಸಹಾಯ
Help for poor patient from Prajwala Trust
ಶಿರಸಿ 12: ಕ್ಯಾನ್ಸರ್ ಪೀಡಿತೆ ಹಾಗೂ ಹೃದಯ ರೋಗದಿಂದ ಬಳಲುತ್ತಿರುವ ಚವತ್ತಿಯ ಆಶಾದೇವಿ ಹೆಗಡೆ ಅವರ ಮನೆಗೆ ಪ್ರಜ್ವಲ ಟ್ರಸ್ಟ್ (ರಿ.), ಶಿರಸಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿದರಲ್ಲದೆ, ತೀರ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾದ ಆಶಾದೇವಿ ಅವರಿಗೆ ಸಾಂತ್ವನ ಹೇಳಿ ಓಷದೊಪಚಾರಕ್ಕಾಗಿ ಧನ ಸಹಾಯವನ್ನು ಮಾಡಿದರು.
ಪದಾಧಿಕಾರಿಯಾದ ಸರಸ್ವತಿ ಕಂಬಾರ ಅವರು ವೈಯಕ್ತಿಕವಾಗಿಯೂ ಧನ ಸಹಾಯ ನೀಡಿದರು. ಅಧ್ಯಕ್ಷೆ ಬಿಂದು ಹೆಗಡೆ, ಮುದ್ರೆ, ಪ್ರಾಣಾಯಾಮ, ಆಧ್ಯಾತ್ಮ ಚಿಂತನೆಗಳ ಬಗೆಗೆ ತಿಳುವಳಿಕೆ ನೀಡಿದರು.ಟ್ರಸ್ಟಿನ ನಿಕಟವರ್ತಿಗಳೂ, ಕಲಾವಿದರೂ, ತಬಲಾವಾದಕರೂ ಆದ ಕಿರಣ ಹೆಗಡೆ ಕಾನಗೋಡ ಅವರು ಈ ಸೇವಾ ಕಾರ್ಯವನ್ನು ಆಯೋಜಿಸಿದ್ದರು.ಟ್ರಸ್ಟಿನ ಅಧ್ಯಕ್ಷರಾದ ಬಿಂದು ಹೆಗಡೆ, ಕಾರ್ಯದರ್ಶಿ ಸುಮಾ ಹೆಗಡೆ, ಸರಸ್ವತಿ ಕಂಬಾರ, ಸುಜಾತಾ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 