ಪ್ರಜ್ವಲ ಟ್ರಸ್ಟ್ನಿಂದ ಬಡರೋಗಿಗೆ ಸಹಾಯ
Help for poor patient from Prajwala Trust
ಶಿರಸಿ 12: ಕ್ಯಾನ್ಸರ್ ಪೀಡಿತೆ ಹಾಗೂ ಹೃದಯ ರೋಗದಿಂದ ಬಳಲುತ್ತಿರುವ ಚವತ್ತಿಯ ಆಶಾದೇವಿ ಹೆಗಡೆ ಅವರ ಮನೆಗೆ ಪ್ರಜ್ವಲ ಟ್ರಸ್ಟ್ (ರಿ.), ಶಿರಸಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿದರಲ್ಲದೆ, ತೀರ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾದ ಆಶಾದೇವಿ ಅವರಿಗೆ ಸಾಂತ್ವನ ಹೇಳಿ ಓಷದೊಪಚಾರಕ್ಕಾಗಿ ಧನ ಸಹಾಯವನ್ನು ಮಾಡಿದರು.
ಪದಾಧಿಕಾರಿಯಾದ ಸರಸ್ವತಿ ಕಂಬಾರ ಅವರು ವೈಯಕ್ತಿಕವಾಗಿಯೂ ಧನ ಸಹಾಯ ನೀಡಿದರು. ಅಧ್ಯಕ್ಷೆ ಬಿಂದು ಹೆಗಡೆ, ಮುದ್ರೆ, ಪ್ರಾಣಾಯಾಮ, ಆಧ್ಯಾತ್ಮ ಚಿಂತನೆಗಳ ಬಗೆಗೆ ತಿಳುವಳಿಕೆ ನೀಡಿದರು.ಟ್ರಸ್ಟಿನ ನಿಕಟವರ್ತಿಗಳೂ, ಕಲಾವಿದರೂ, ತಬಲಾವಾದಕರೂ ಆದ ಕಿರಣ ಹೆಗಡೆ ಕಾನಗೋಡ ಅವರು ಈ ಸೇವಾ ಕಾರ್ಯವನ್ನು ಆಯೋಜಿಸಿದ್ದರು.ಟ್ರಸ್ಟಿನ ಅಧ್ಯಕ್ಷರಾದ ಬಿಂದು ಹೆಗಡೆ, ಕಾರ್ಯದರ್ಶಿ ಸುಮಾ ಹೆಗಡೆ, ಸರಸ್ವತಿ ಕಂಬಾರ, ಸುಜಾತಾ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 