ಕಾರವಾರ ಮಳೆ: ಕಾರವಾರ ಬಸ್ ಡಿಪೋ ಜಲಮಯ
Heavy rain from eight to nine in the morning
ಕಾರವಾರ 18: ಉತ್ತರ ಕನ್ನಡ ಕರಾವಳಿಯಲ್ಲಿ ಶುಕ್ರವಾರ ಮಳೆ ಮುಂದುವರಿದಿದೆ . ಕಾರವಾರದಲ್ಲಿ ಬೆಳಿಗ್ಗೆ ಎಂಟರಿಂದ ಒಂಬತ್ತು ಗಂಟೆ ತನಕ ಭಾರೀ ಮಳೆ ಸುರಿಯಿತು. ಕಾರವಾರ ಬಸ್ ಡಿಪೋ ಸೇರಿದಂತೆ ತಗ್ಗು ಪ್ರದೇಶಗಳಾದ ನ್ಯೂ ಕೆಎಚ್ ಬಿ ಕಾಲೂನಿ ಜ್ಞಾನೇಶ್ವರಿ ವಿದ್ಯಾಮಂದಿರ, ಗುನಗಿವಾಡದ ಕೆಲಭಾಗ ,ಸಂಕ್ರೀವಾಡ, ಮತ್ತೆ ಜಲಮಯವಾದವು .
ಮಳೆ ಕಡಿಮೆಯಾದ ಒಂದು ತಾಸಿನಲ್ಲಿ ಜಲಾವೃತ ಪ್ರದೇಶಗಳು ಸಹಜ ಸ್ಥಿತಿಗೆ ಬಂದವು. ಕಡವಾಡ ,ಕಿನ್ನರ, ಕಣಜಗೇರಿ ಕೆಲ ಪ್ರದೇಶ ಜಲಾವೃತವಾಗಿದ್ದವು. ಗುರುವಾರ ದಿಂದ ಶುಕ್ರವಾರ ಬೆಳಗಿನ ಎಂಟುಗಂಟೆ ಹೊತ್ತಿಗೆಭಟ್ಕಳದಲ್ಲಿ 52.8 , ಹಳಿಯಾಳ 2.9, ಹೊನ್ನಾವರ 73.1, ಕಾರವಾರ 59.6, ಮಿಲಿ ಮೀಟರ್ ಮಳೆ ಸುರಿದಿದ್ದು , ಶುಕ್ರವಾರ ಹಗಲು ಮಳೆ ಮುಂದುವರಿದಿತ್ತು. ದಾಂಡೇಲಿ ,ಶಿರಸಿ, ಯಲ್ಲಾಪುರ ಅರೆಬೈಲ ಘಟ್ಟದಲ್ಲಿ ಸತತ ಮಳೆ ಬೀಳುತ್ತಿತ್ತು. ಅಣಶಿ, ದೇವಿಮನೆ ಘಟ್ಟ, ಮನೆಮನೆ ಘಟ್ಟದಲ್ಲಿ ಮಳೆ ಬಿರುಸಾಗಿತ್ತು.ಹೊನ್ನಾವರದಲ್ಲಿ ಅತೀ ಹೆಚ್ಚು ಮಳೆಯಾಗಿದೆ . ಯಾವುದೇ ಜೀವ ಹಾನಿಯಾಗಿಲ್ಲ. ಭಟ್ಕಳ, ಕಾರವಾರ, ಹೊನ್ನಾವರ, ಕುಮಟಾದಲ್ಲಿ ಹೆಚ್ಚು ಮಳೆಯಾದರೆ, ಅಂಕೋಲಾದಲ್ಲಿ ಸಾಧಾರಣ ಮಳೆಯಾಗಿದೆ. ಘಟ್ಟದ ಮೇಲೆ ಹಿತಕರ ಮಳೆ ಮುಂದುವರಿದಿದೆ. ಸಂಪ್ರದಾಯಿಕ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಮಳೆ ನಾಲ್ಕು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆ ವಿವರ : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 36.2, ಮಿಮೀ, ಭಟ್ಕಳದಲ್ಲಿ 52.8 , ಹಳಿಯಾಳ 2.9, ಹೊನ್ನಾವರ 73.1, ಕಾರವಾರ 59.6, ಕುಮಟಾ 48.9, ಮುಂಡಗೋಡ 3.3, ಸಿದ್ದಾಪುರ 23.9, ಶಿರಸಿ 15.3, ಸೂಪಾ 31.7, ಯಲ್ಲಾಪುರ 5.2, ದಾಂಡೇಲಿಯಲ್ಲಿ 7.9, ಮಿಲಿ ಮೀಟರ್ ಮಳೆ ಸುರಿದಿದೆ..
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 