ಕಾರವಾರದಲ್ಲಿ ರಭಸದ ಗಾಳಿ ಮಳೆ
Heavy rain and wind in Karwar
ಕಾರವಾರದಲ್ಲಿ ರಭಸದ ಗಾಳಿ ಮಳೆ
ಕಾರವಾರ 25: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಶನಿವಾರ ಭಾರೀ ಮಳೆ ಸರಿಯಿತು. ಶನಿವಾರ ಬೆಳಗಿನ ಜಾವ 3 ಗಂಟೆಯಿಂದ 9 ಗಂಟೆ ತನಕ ಸತತ ಮಳೆ ಸುರಿಯಿತು. ಪರಿಣಾಮ ಕಾರವಾರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಅಂಕೋಲಾದ ಹಾರವಾಡ, ಬೇಲೇಕೇರಿ.ಭಾವಿಕೇರಿ, ಕುಮಟಾದ ಹನೇಹಳ್ಳಿ ಯಲ್ಲಿ ಭಾರೀ ಮಳೆ ಸುರಿಯಿತು.ಶನಿವಾರ ಹಗಲು ಕರಾವಳಿ ತಾಲೂಕುಗಳಲ್ಲಿ ಆಗಾಗ ರಭಸದಮಳೆ ಸುರಿದಿದೆ. ವೈಲವಾಡದಲ್ಲಿ 60 ಮಿಲಿಮೀಟರ್, ಮುಡಗೇರಿ 49,ಅಸ್ನೊಟಿ 54, ಮಾಜಾಳಿ 58, ಶಿರವಾಡ 44, ಗೋಟೆಗಾಳಿಯಲ್ಲಿ 42, ಹಾರವಾಡದಲ್ಲಿ 80, ಹೊನ್ನಾವರದ ಹಳದಿಪುರದಲ್ಲಿ 62 , ಅಂಕೋಲಾದಲ್ಲಿ 49, ಬೇಲೇಕೇರಿ 76, ಬಾವಿಕೇರಿ 65.5, ಸಗಡಗೇರಿ 47, ಹಟ್ಟಿಕೇರಿ 68, ಕುಮಟಾ 73 ಮಿಲಿಮೀಟರ್ ಮಳೆಯಾಗಿದೆ. ಇನ್ನು ಘಟ್ಟದ ಮೇಲೆ ದಾಂಡೇಲಿ ,ಹಳಿಯಾಳದಲ್ಲಿ ಶನಿವಾರ ತುಂತುರು ಮಳೆಯಾಗಿದೆ. ದಾಂಡೇಲಿ, ಜೊಯಿಡಾದಲ್ಲಿ ತುಂತುರು ಮಳೆಯಾಗಿದೆ. ಘಟ್ಟದ ಇತರೆ ತಾಲೂಕುಗಳಲ್ಲಿ ಸಹ ಸಣ್ಣ ಮಳೆ ಸುರಿದಿದೆ. ಎಲ್ಲಿಯೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅ.27 ರತನಕ ಮಳೆ ಮುಂದುವರಿಯಲಿದೆ .ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 