ಕಾರವಾರದಲ್ಲಿ ರಭಸದ ಗಾಳಿ ಮಳೆ
Heavy rain and wind in Karwar
ಕಾರವಾರದಲ್ಲಿ ರಭಸದ ಗಾಳಿ ಮಳೆ
ಕಾರವಾರ 25: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಶನಿವಾರ ಭಾರೀ ಮಳೆ ಸರಿಯಿತು. ಶನಿವಾರ ಬೆಳಗಿನ ಜಾವ 3 ಗಂಟೆಯಿಂದ 9 ಗಂಟೆ ತನಕ ಸತತ ಮಳೆ ಸುರಿಯಿತು. ಪರಿಣಾಮ ಕಾರವಾರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಅಂಕೋಲಾದ ಹಾರವಾಡ, ಬೇಲೇಕೇರಿ.ಭಾವಿಕೇರಿ, ಕುಮಟಾದ ಹನೇಹಳ್ಳಿ ಯಲ್ಲಿ ಭಾರೀ ಮಳೆ ಸುರಿಯಿತು.ಶನಿವಾರ ಹಗಲು ಕರಾವಳಿ ತಾಲೂಕುಗಳಲ್ಲಿ ಆಗಾಗ ರಭಸದಮಳೆ ಸುರಿದಿದೆ. ವೈಲವಾಡದಲ್ಲಿ 60 ಮಿಲಿಮೀಟರ್, ಮುಡಗೇರಿ 49,ಅಸ್ನೊಟಿ 54, ಮಾಜಾಳಿ 58, ಶಿರವಾಡ 44, ಗೋಟೆಗಾಳಿಯಲ್ಲಿ 42, ಹಾರವಾಡದಲ್ಲಿ 80, ಹೊನ್ನಾವರದ ಹಳದಿಪುರದಲ್ಲಿ 62 , ಅಂಕೋಲಾದಲ್ಲಿ 49, ಬೇಲೇಕೇರಿ 76, ಬಾವಿಕೇರಿ 65.5, ಸಗಡಗೇರಿ 47, ಹಟ್ಟಿಕೇರಿ 68, ಕುಮಟಾ 73 ಮಿಲಿಮೀಟರ್ ಮಳೆಯಾಗಿದೆ. ಇನ್ನು ಘಟ್ಟದ ಮೇಲೆ ದಾಂಡೇಲಿ ,ಹಳಿಯಾಳದಲ್ಲಿ ಶನಿವಾರ ತುಂತುರು ಮಳೆಯಾಗಿದೆ. ದಾಂಡೇಲಿ, ಜೊಯಿಡಾದಲ್ಲಿ ತುಂತುರು ಮಳೆಯಾಗಿದೆ. ಘಟ್ಟದ ಇತರೆ ತಾಲೂಕುಗಳಲ್ಲಿ ಸಹ ಸಣ್ಣ ಮಳೆ ಸುರಿದಿದೆ. ಎಲ್ಲಿಯೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅ.27 ರತನಕ ಮಳೆ ಮುಂದುವರಿಯಲಿದೆ .ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 