ಕಾರವಾರದಲ್ಲಿ ರಭಸದ ಗಾಳಿ ಮಳೆ
Heavy rain and wind in Karwar
ಕಾರವಾರದಲ್ಲಿ ರಭಸದ ಗಾಳಿ ಮಳೆ
ಕಾರವಾರ 25: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಶನಿವಾರ ಭಾರೀ ಮಳೆ ಸರಿಯಿತು. ಶನಿವಾರ ಬೆಳಗಿನ ಜಾವ 3 ಗಂಟೆಯಿಂದ 9 ಗಂಟೆ ತನಕ ಸತತ ಮಳೆ ಸುರಿಯಿತು. ಪರಿಣಾಮ ಕಾರವಾರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಅಂಕೋಲಾದ ಹಾರವಾಡ, ಬೇಲೇಕೇರಿ.ಭಾವಿಕೇರಿ, ಕುಮಟಾದ ಹನೇಹಳ್ಳಿ ಯಲ್ಲಿ ಭಾರೀ ಮಳೆ ಸುರಿಯಿತು.ಶನಿವಾರ ಹಗಲು ಕರಾವಳಿ ತಾಲೂಕುಗಳಲ್ಲಿ ಆಗಾಗ ರಭಸದಮಳೆ ಸುರಿದಿದೆ. ವೈಲವಾಡದಲ್ಲಿ 60 ಮಿಲಿಮೀಟರ್, ಮುಡಗೇರಿ 49,ಅಸ್ನೊಟಿ 54, ಮಾಜಾಳಿ 58, ಶಿರವಾಡ 44, ಗೋಟೆಗಾಳಿಯಲ್ಲಿ 42, ಹಾರವಾಡದಲ್ಲಿ 80, ಹೊನ್ನಾವರದ ಹಳದಿಪುರದಲ್ಲಿ 62 , ಅಂಕೋಲಾದಲ್ಲಿ 49, ಬೇಲೇಕೇರಿ 76, ಬಾವಿಕೇರಿ 65.5, ಸಗಡಗೇರಿ 47, ಹಟ್ಟಿಕೇರಿ 68, ಕುಮಟಾ 73 ಮಿಲಿಮೀಟರ್ ಮಳೆಯಾಗಿದೆ. ಇನ್ನು ಘಟ್ಟದ ಮೇಲೆ ದಾಂಡೇಲಿ ,ಹಳಿಯಾಳದಲ್ಲಿ ಶನಿವಾರ ತುಂತುರು ಮಳೆಯಾಗಿದೆ. ದಾಂಡೇಲಿ, ಜೊಯಿಡಾದಲ್ಲಿ ತುಂತುರು ಮಳೆಯಾಗಿದೆ. ಘಟ್ಟದ ಇತರೆ ತಾಲೂಕುಗಳಲ್ಲಿ ಸಹ ಸಣ್ಣ ಮಳೆ ಸುರಿದಿದೆ. ಎಲ್ಲಿಯೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅ.27 ರತನಕ ಮಳೆ ಮುಂದುವರಿಯಲಿದೆ .ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 