ಅಪಾರ ಮಳೆ : ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ

ಅಪಾರ ಮಳೆ : ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ Heavy rain: JCB clears water

ಸಿಂದಗಿ 29:   ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು. 

ಸಿಂದಗಿ; ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಇಂದು ವಾರ್ಡ್‌ ಸಂಖ್ಯೆ 19ರ ಓಂ ನಗರದ ಕುಲಕರ್ಣಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು. 

ವಾರ್ಡ್‌ ನಂ 10ರಲ್ಲಿ ಮನೆಗಳು ಬಿದ್ದಿರುವುದರಿಂದ ಆ ವಾರ್ಡಿನ  ಜನರ ಸಮಸ್ಯೆ ಆಲಿಸಲು ಬಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಪರಿಹಾರ ಕಲ್ಪಿಸಲು ಸೂಚಿಸಿದರು. ವಾರ್ಡ್‌ ಸಂಖ್ಯೆ 14 ರ ಕರ್ನಾಟಕ ಬ್ಯಾಂಕ್ ಹಿಂದುಗಡೆ  ನೀರು ತುಂಬಿಕೊಂಡಿದ್ದು ಸಂಚಾರಕ್ಕೆ ಅನುಕೂಲವಾಗುವಂತೆ ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿದರು. 

ಈ ಸಂದರ್ಭದಲ್ಲಿ ಪುರಸಭೆ ಕಿರಿಯ ಅಭಿಯಂತರ ಎ.ಜೆ.ನಾಟೀಕಾರ, ಸಿನಿಯಟರಿ ಅಧಿಕಾರಿ ನಭಿರಸೂಲ ಉಸ್ತಾದ, ಸದಸ್ಯ ಸಿದ್ದು ಮಲ್ಲೇದ, ದುರೀಣರಾದ ಭೀಮನಗೌಡ ಬಿರಾದಾರ,ಶಿಕ್ಷಕ ಪೋದ್ದಾರ ಸೇರಿದಂತೆ ವಾರ್ಡುಗಳ ಜನರು ಸಮಸ್ಯೆಗಳನ್ನು ವಿವರಿಸುವಲ್ಲಿ ಸಹಕಾರಿಯಾದರು.