10ರಿಂದ ಮುಳಸಾವಳಗಿ ಹಜರತ್ ಮತಾಬಷಹೀದ ಜಾತ್ರೆ
Hazrat Madhabashhida Fair to be held in Mulasavalagi from 10th
10ರಿಂದ ಮುಳಸಾವಳಗಿ ಹಜರತ್ ಮತಾಬಷಹೀದ ಜಾತ್ರೆ
ದೇವರಹಿಪ್ಪರಗಿ 07: ತಾಲೂಕಿನ ಮುಳಸಾವಳಗಿ ಗ್ರಾಮದ ಹಜರತ್ ಮತಾಬಷಹೀದ ಜಾತ್ರಾ ಮಹೋತ್ಸವವು ಇದೇ ಆಗಸ್ಟ್ ತಿಂಗಳ ದಿನಾಂಕ 10,11,12 ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಅ.10 ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಇದೇ ದಿನ ರಾತ್ರಿ 8 ಗಂಟೆಗೆ ಅಂಕಲಗಿ ಗ್ರಾಮದ ಕಾಶೀಂಪಟೇಲ್ ಪೋಲಿಸಪಾಟೀಲ ಇವರಿಂದ ಧಾರ್ಮಿಕ ಕ್ರಿಯಾಚಾರಗಳೊಂದಿಗೆ ಗಂಧೋತ್ಸವ, ಕುದುರೆ ಕುಣಿತ ಹಾಗೂ ರಂಗುರಂಗಿನ ಮದ್ದು ಸುಡುವ ಕಾರ್ಯಕ್ರಮ ನಡೆಯುವುದು. ರಾತ್ರಿ 10 ಗಂಟೆಗೆ ಧರ್ಮದ ಒಡಲಿಗೆ ಕರ್ಮದ ಬೆಂಕಿ ಎಂಬ ಸಾಮಾಜಿಕ ನಾಟಕದ ಮೊದಲ ಪ್ರವೇಶ ಅಭಿನಯಿಸಲ್ಪಡಲಿದೆ.
ಅ.11 ರಂದು ದೀಪೋತ್ಸವ, ನೈವಿಧ್ಯ ಸಮರೆ್ಣ ಹಾಗೂ ರಾತ್ರಿ 10ಗಂಟೆಗೆ ಕಲಾದೇವಿ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.ಅ.12 ರಂದು ಬಾಶೀ ದೀಪೋತ್ಸವ,ಕಾಯಿ ಕಪೂರದ ಕಾರ್ಯಕ್ರಮವಿದ್ದು, ಇದೇ ದಿನ ತೆಕ್ಕೆ ಬಡಿದು ಚೀಲ ಎತ್ತುವ, ಗುಂಡು ಎತ್ತುವ, ಸಂಗ್ರಾಣಿ ಕಲ್ಲು ಸಿಡಿ ಎತ್ತುವ, ಜಂಗೀಕುಸ್ತಿಯ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 10ಕ್ಕೆ ಸಾಮಾಜಿಕ ನಾಟಕದ ದ್ವಿತೀಯ ಪ್ರವೇಶ ನಡೆಯಲಿದೆ.
ಜಾತ್ರೆಗೆ ಬರುವ ಭಕ್ತರಿಗೆ ಮುಳಸಾವಳಗಿಯಿಂದ ದೇವರಹಿಪ್ಪರಗಿ ಹಾಗೂ ದೇವರಹಿಪ್ಪರಗಿಯಿಂದ ಮುಳಸಾವಳಗಿಯವರೆಗೆ ಜಾತ್ರೆಯ ಮೂರು ದಿನಗಳ ಕಾಲ ಉಚಿತ ವಾಹನ ವ್ಯವಸ್ಥೆ ಇರುತ್ತದೆ ಎಂದು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 