ಜ.1 ರಂದು ಹಜರತ್ ಬಡೇಸಾಹೇಬ್ ಉರುಸು ಜಿಯಾರತ್ ಪಲ್ಲಕ್ಕಿ ಉತ್ಸವ

ಜ.1 ರಂದು ಹಜರತ್ ಬಡೇಸಾಹೇಬ್ ಉರುಸು ಜಿಯಾರತ್ ಪಲ್ಲಕ್ಕಿ ಉತ್ಸವ  Hazrat Badesaheb Urs Ziarat Palanki Festival on January 1st

                     ಕಂಪ್ಲಿ:27 ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಹಜರತ್ ಬಡೇ ಸಾಹೇಬ್ ದರ್ಗಾದಲ್ಲಿ ಮೂರು ದಿನ ನಡೆಯುವ 238ನೇ ಗಂಧ ಮತ್ತು ಉರುಸ್ ಹಿನ್ನಲೆ ಧರ್ಮಗುರುಗಳಾದ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಸೈಯದ್ ಷಾ ಅಬ್ದುಲ್ ಖಾದರ್ ಖಾದ್ರಿ, ಸೈಯದ್ ಷಾ ಮೆಹಮೂದ್ ಖಾದ್ರಿ, ಸೈಯದ್ ಷಾ ಹುಸೇನ್ ಪೀರ ಖಾದ್ರಿ, ಸೈಯದ್ ಷಾ ಗೇಸುದರಾಜ್ ಖಾದ್ರಿ, ಸೈಯದ್ ಅಬ್ದುಲ್ ಖಾದರ್ ಖಾದ್ರಿ, ಸೈಯದ್ ಷಾ ಅಬುತುರಾಬ್ ಖಾದ್ರಿ, ಸೈಯದ್ ಶಮ್ ಸುದ್ದೀನ್ ಖಾದ್ರಿ ಇವರ ದಿವ್ಯ ಸಾನಿಧ್ಯದಲ್ಲಿ ಕ್ಯಾಲೆಂಡರ್ ಮತ್ತು ಉರುಸ್ ಭಿತ್ತಿ ಪತ್ರಗಳನ್ನು ಶುಕ್ರವಾರ ಬಿಡುಗಡೆ ಮಾಡಿದರು.

                    ನಂತರ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಮೂರು ದಿನಗಳ ಕಾಲ ಹಜರತ್ ಬಡೇಸಾಬ್ ದರ್ಗಾದಲ್ಲಿ ಗಂಧ, ಉರುಸ್, ಜಿಯಾರತ್ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಇದೇ ಡಿಸೆಂಬರ್ 31ರಂದು ಗಂಧ, 2026ರ ಜನವರಿ 1ರಂದು ಉರುಸ್ ಹಾಗೂ 2ರಂದು ಜಿಯಾರತ್ ಮತ್ತು ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಆದ್ದರಿಂದ ಸರ್ವ ಧರ್ಮಿಯರು ಆಗಮಿಸಿ ಯಶಸ್ವಿಗೊಳಿಸಬೇಕು. ಭಕ್ತರಿಗಾಗಿ ಅನ್ನಸಂತಾರೆ​‍್ಣ ವ್ಯವಸ್ಥೆ ಮಾಡಲಾಗಿದೆ. ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಹಾಜಿ ಕರೀಂಸಾಬ್, ಕೆ.ಮೆಹಬೂಬ್, ಯು.ಜಿಲಾನ್, ಯು.ಜಹಿರುದ್ಧೀನ್, ಬಡಿಗೇರ ಅಜೀಜ್ ಸಾಬ್, ಮುದುಗಲ್ ರೋಷನ್, ಗೆಜ್ಜಳ್ಳಿ ಭಾಷಾ, ಬಡಿಗೇರ ಜಿಲಾನಸಾಬ್, ಹೊನ್ನೂರವಲಿ ಸೇರಿದಂತೆ ಮುಸ್ಲಿಂ ಬಾಂಧವರು ಇದ್ದರು.